<p><strong>ಬೆಂಗಳೂರು:</strong> ಸವಿತಾ ಸಮಾಜದ ಆರ್ಥಿಕ ಉತ್ತೇಜನಕ್ಕೆ ನೆರವಾಗುವ ಯೋಜನೆಯಡಿ ಪೂರೈಸಲಾಗಿದ್ದ 98 ಕಿಟ್ಗಳ ₹ 6 ಲಕ್ಷಕ್ಕೂ ಹೆಚ್ಚಿನ ಬಾಕಿ ಪಾವತಿ ಮಾಡದ ಆರೋಪದಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.</p>.<p>ಈ ಕುರಿತಂತೆ ಮೆಸರ್ಸ್ ಮ್ಯಾಕ್ಸ್ ಟ್ರೇಡರ್ಸ್ ಮಾಲೀಕರಾದ ಪ್ರಿಯಾ ಬಿರಾದಾರ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.</p>.<p>ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ, ಜಂಟಿ ಆಯುಕ್ತ ಸೇರಿದಂತೆ ಒಟ್ಟು ಆರು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.</p>.<p>ಪ್ರಕರಣವೇನು?: ಹಿಂದುಳಿದ ವರ್ಗಗಳ ಆರ್ಥಿಕ ಉತ್ತೇಜನಕ್ಕೆ ನೆರವಾಗುವ ಯೋಜನೆಯಡಿ ಕರೆಯಲಾಗಿದ್ದ ಕಿಟ್ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಮ್ಯಾಕ್ಸ್ ಟ್ರೇಡರ್ಸ್ ಪಾಲ್ಗೊಂಡಿತ್ತು. ಪ್ರತಿಯೊಂದು ಕಿಟ್ನ ಮೌಲ್ಯ ₹ 6,786ಕ್ಕೆ ನಿಗದಿಯಾಗಿ ಅದರಂತೆ ಬಿಬಿಎಂಪಿಗೆ 98 ವೃತ್ತಿಪರ ಕಿಟ್ಗಳನ್ನು ಪೂರೈಸಿತ್ತು. ಈ 98 ಕಿಟ್ಗಳ ಬಾಕಿ ಮೊತ್ತವಾದ ₹ 6.60 ಲಕ್ಷವನ್ನು ಬಿಬಿಎಂಪಿ ಕಂಪನಿಗೆ ಪಾವತಿ ಮಾಡಿರಲಿಲ್ಲ. </p>.<p>ಈ ಕುರಿತಂತೆ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಎರಡು ತಿಂಗಳಲ್ಲಿ ಪರಿಗಣಿಸುವಂತೆ ಆದೇಶಿಸಿತ್ತು. ‘ಏಕಸದಸ್ಯ ನ್ಯಾಯಪೀಠದ ಆದೇಶ ಪಾಲನೆ ಮಾಡಿಲ್ಲ’ ಎಂದು ಆಕ್ಷೇಪಿಸಿ ಕಂಪನಿ ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸವಿತಾ ಸಮಾಜದ ಆರ್ಥಿಕ ಉತ್ತೇಜನಕ್ಕೆ ನೆರವಾಗುವ ಯೋಜನೆಯಡಿ ಪೂರೈಸಲಾಗಿದ್ದ 98 ಕಿಟ್ಗಳ ₹ 6 ಲಕ್ಷಕ್ಕೂ ಹೆಚ್ಚಿನ ಬಾಕಿ ಪಾವತಿ ಮಾಡದ ಆರೋಪದಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.</p>.<p>ಈ ಕುರಿತಂತೆ ಮೆಸರ್ಸ್ ಮ್ಯಾಕ್ಸ್ ಟ್ರೇಡರ್ಸ್ ಮಾಲೀಕರಾದ ಪ್ರಿಯಾ ಬಿರಾದಾರ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.</p>.<p>ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ, ಜಂಟಿ ಆಯುಕ್ತ ಸೇರಿದಂತೆ ಒಟ್ಟು ಆರು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.</p>.<p>ಪ್ರಕರಣವೇನು?: ಹಿಂದುಳಿದ ವರ್ಗಗಳ ಆರ್ಥಿಕ ಉತ್ತೇಜನಕ್ಕೆ ನೆರವಾಗುವ ಯೋಜನೆಯಡಿ ಕರೆಯಲಾಗಿದ್ದ ಕಿಟ್ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಮ್ಯಾಕ್ಸ್ ಟ್ರೇಡರ್ಸ್ ಪಾಲ್ಗೊಂಡಿತ್ತು. ಪ್ರತಿಯೊಂದು ಕಿಟ್ನ ಮೌಲ್ಯ ₹ 6,786ಕ್ಕೆ ನಿಗದಿಯಾಗಿ ಅದರಂತೆ ಬಿಬಿಎಂಪಿಗೆ 98 ವೃತ್ತಿಪರ ಕಿಟ್ಗಳನ್ನು ಪೂರೈಸಿತ್ತು. ಈ 98 ಕಿಟ್ಗಳ ಬಾಕಿ ಮೊತ್ತವಾದ ₹ 6.60 ಲಕ್ಷವನ್ನು ಬಿಬಿಎಂಪಿ ಕಂಪನಿಗೆ ಪಾವತಿ ಮಾಡಿರಲಿಲ್ಲ. </p>.<p>ಈ ಕುರಿತಂತೆ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಎರಡು ತಿಂಗಳಲ್ಲಿ ಪರಿಗಣಿಸುವಂತೆ ಆದೇಶಿಸಿತ್ತು. ‘ಏಕಸದಸ್ಯ ನ್ಯಾಯಪೀಠದ ಆದೇಶ ಪಾಲನೆ ಮಾಡಿಲ್ಲ’ ಎಂದು ಆಕ್ಷೇಪಿಸಿ ಕಂಪನಿ ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>