ಇದಕ್ಕೆ ಪ್ರಸನ್ನ ಕುಮಾರ್, ‘2020ರ ಅಕ್ಟೋಬರ್ 3ರಂದೇ ಎಫ್ಐಆರ್ ದಾಖಲಿಸಲಾಗಿದೆ. ಕೋವಿಡ್ನಿಂದಾಗಿ ಎರಡು ವರ್ಷ ತನಿಖೆ ನಡೆಸಲು ಆಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡ ಕಾರಣ ಯಾವುದೇ ಪ್ರಗತಿ ಆಗಿಲ್ಲ. ಇಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹೈಕೋರ್ಟ್ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ಮತ್ತು ಮೇಲ್ಮನವಿ ಹಾಗೂ ಈಗಿನ ಅರ್ಜಿಯೂ ಸೇರಿದರೆ ಆರನೇ ಅರ್ಜಿಯಾಗುತ್ತದೆ. ಹೀಗಾಗಿ, ಪ್ರಕರಣದ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಬರೀ ಕೋರ್ಟ್ನಲ್ಲೇ ಅಲೆದಾಡಿಸುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.