ಜಿ.ಟಿ. ದೇವೇಗೌಡ ಬಿಟ್ಟರೆ ಬೇರಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕ್ಷೇತ್ರದ ಕೆಲಸ ಮಾಡಿಸುವುದಕ್ಕಾಗಿ, ವಿಧಾನಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ಪರ ಮತ ಚಲಾಯಿಸಿದೆ ಎಂದು ಅವರೇ ಹೇಳಿದ್ದಾರೆ. ಹಿಂದೆ ಅವರು ಬಿಜೆಪಿಗೆ ಹೋಗಿದ್ದರು. ಈಗ ಬಿಜೆಪಿಗೆ ಹೋಗುತ್ತಾರೋ, ಕಾಂಗ್ರೆಸ್ಸಿಗೋ ಅವರಿಗೇ ಬಿಟ್ಟದ್ದು. ಯಾರನ್ನೂ ಕಟ್ಟಿ ಹಾಕಲು ಆಗುವುದಿಲ್ಲ ಎಂದು ತಿಳಿಸಿದರು.