ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ

Published 9 ಫೆಬ್ರುವರಿ 2024, 16:23 IST
Last Updated 9 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ವಿಜಯ್ ಶರ್ಮಾ ಅವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾನೂನು ವಿಭಾಗಕ್ಕೆ ವರ್ಗಾವಣೆ ಮಾಡಿದ್ದು, ಇವರೂ ಸೇರಿ ಒಟ್ಟು ಎಂಟು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬ್ರಿಜೇಶ್‌ಕುಮಾರ್‌– ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್) ಅರಣ್ಯ ವಿಭಾಗ, ಬೆಂಗಳೂರು. ಪ್ರಭಾಶ್‌ ಚಂದ್ರ ರೇ– ಅರಣ್ಯ ಇಲಾಖೆ ಕಾರ್ಯದರ್ಶಿ. ಡಾ.ಸಂಜಯ್‌ ಬಿಜ್ಜೂರ್– ಎಪಿಸಿಸಿಎಫ್, ಕ್ಯಾಂಪಾ, ಬೆಂಗಳೂರು. ಅಶ್ವಿನಿ ಕುಮಾರ್‌ ಸಿಂಗ್‌– ಎಪಿಸಿಸಿಎಫ್ (ಸಂಶೋಧನೆ), ಬೆಂಗಳೂರು.

ಲಿಂಗರಾಜ ಎಸ್‌ಎಸ್‌–ಎಪಿಸಿಸಿಎಫ್, ಆಡಳಿತ ಮತ್ತು ಸಮನ್ವಯ, ಬೆಂಗಳೂರು. ಇವರಿಗೆ ಮೈಸೂರು ಹುಲಿ ಸಂರಕ್ಷಣೆ ಯೋಜನೆಯ ಎಪಿಸಿಸಿಎಫ್ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಸುನಿಲ್‌ ಪನ್ವಾರ್‌–ಎಪಿಸಿಸಿಎಫ್, ಮೈಸೂರು ಮೃಗಾಲಯ ಇಲ್ಲಿ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT