<p><strong>ಬೆಂಗಳೂರು</strong>: ರಾಜ್ಯದ ಉದ್ದಗಲಕ್ಕೂ ಸೋಮವಾರ ಅಮೃತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮೇಳೈಸಿದ್ದು, ದೇಶಭಕ್ತಿ ಗೀತೆಗಳ ಗಾಯನ, ಪಥ ಸಂಚಲನ, ಬೃಹತ್ ತ್ರಿವರ್ಣ ಧ್ವಜಗಳ ಪ್ರಸ್ತುತಿ ಗಮನಸೆಳೆಯಿತು.</p>.<p>ಕೋಲಾರದಲ್ಲಿ ಹೆಲಿಕಾಪ್ಟರ್ ಬಳಸಿ ಧ್ವಜಕ್ಕೆ ಪುಷ್ಪವೃಷ್ಟಿ ಮಾಡಿದರೆ, ಹೆಚ್ಚಿನ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಕಲಾ ತಂಡಗಳು ಮೆರುಗು ಹೆಚ್ಚಿಸಿದವು. ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.</p>.<p><strong>ಹಾರದ ರಾಷ್ಟ್ರಧ್ವಜ (ಬಾಗಲಕೋಟೆ ವರದಿ):</strong> ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಧ್ವಜಕ್ಕೆ ಕಟ್ಟಿದ್ದ ಹಗ್ಗದ ಗಂಟು ಬಿಚ್ಚದೆ ಧ್ಚಜ ಹಾರಲಿಲ್ಲ.</p>.<p>ಹಲವಾರು ಬಾರಿ ಹಗ್ಗ ಎಳೆದರೂ ಧ್ವಜ ಬಿಚ್ಚಲಿಲ್ಲ. ಕೊನೆಗೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಧ್ವಜಕ್ಕೆ ಕಟ್ಟಿದ್ದ ಹಗ್ಗ ಸರಿಪಡಿಸಿ ಮತ್ತೆ ಧ್ವಜ ಏರಿಸಲಾಯಿತು. ಸಚಿವರು ತಮ್ಮ ಭಾಷಣದಲ್ಲಿ ನೆಹರೂ ಸೇವೆ ಸ್ಮರಿಸಿದರು.</p>.<p><strong>ಪಥಸಂಚಲನ ಮೊಟಕು– ವಿದ್ಯಾರ್ಥಿಗಳ ಆಕ್ರೋಶ:</strong> (ಮಂಡ್ಯ ವರದಿ): ಸಚಿವ ಅಶೋಕ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಮೊಟಕುಗೊಳಿಸಲು ಸೂಚಿಸಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಯಿತು.</p>.<p>ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಬೇಕು ಎಂದು ಸಚಿವರು ಕಾರಣ ನೀಡಿದ್ದರು. ‘15 ದಿನದಿಂದ ತಾಲೀಮು ನಡೆಸಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಇಲ್ಲವೇ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.</p>.<p><strong>ಕೆರೆಯಲ್ಲಿ ರಾಷ್ಟ್ರ ಧ್ವಜಾರೋಹಣ (ಮಂಡ್ಯ ವರದಿ):</strong> ಕೆ.ಆರ್.ಪೇಟೆಯದೇವೀರಮ್ಮಣಿ ಕೆರೆ ಮಧ್ಯೆ ಗಂಗಾಪರಮೇಶ್ವರಿ ಮೀನುಗಾರಿಕೆ ಸಂಘದಿಂದ ಧ್ವಜಾರೋಹಣ ಮಾಡಲಾಯಿತು. ತಹಶೀಲ್ದಾರ್ ರೂಪಾ ತೆಪ್ಪದಲ್ಲಿ ತೆರಳಿ ವಂದನೆ ಸಲ್ಲಿಸಿದರು.</p>.<p><strong>ತ್ರಿವರ್ಣ ಧ್ವಜ ವಿರೂಪ: ಮೂವರು ವಶಕ್ಕೆ</strong><br /><strong>ಮಲೇಬೆನ್ನೂರು (ದಾವಣಗೆರೆ ಜಿಲ್ಲೆ):</strong> ಪಟ್ಟಣದ ಜಿಗಳಿ ವೃತ್ತದಲ್ಲಿ ಸೋಮವಾರ ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿ ಬೈಕ್ನಲ್ಲಿ ಮೆರವಣಿಗೆ ನಡೆಸಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜಾಲತಾಣಗಳಲ್ಲಿ ಈ ಚಿತ್ರ ಹರಿದಾಡುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.</p>.<p><strong>ಕೋಲಾರ: ಬೃಹತ್ ಧ್ವಜ ಪ್ರದರ್ಶನ: (ಕೋಲಾರ ವರದಿ):</strong> ದೇಶದಲ್ಲೇ ಅತಿ ದೊಡ್ಡದು ಎನ್ನಲಾದ 205x630 ಅಡಿ ವಿಸ್ತೀರ್ಣದ ತ್ರಿವರ್ಣಧ್ವಜವನ್ನು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾಯಿತು. ಧ್ವಜಕ್ಕೆ ರಕ್ಷಣಾ ಪಡೆಯು ಹೆಲಿಕಾಪ್ಟರ್ ಮೂಲಕ ಎರಡು ಸುತ್ತು ಪುಷ್ಪವೃಷ್ಟಿಗರೆಯಿತು.</p>.<p>ಧ್ವಜಕ್ಕೆ 12,800 ಮೀಟರ್ ಬಟ್ಟೆ ಬಳಸಿದ್ದು, 3,300 ಕೆ.ಜಿ ತೂಕ ಇದೆ. 1.29 ಲಕ್ಷ ಚದರ ಅಡಿ ವಿಸ್ತೀರ್ಣದ ಧ್ವಜದಲ್ಲಿನ ಅಶೋಕ ಚಕ್ರವೇ 3,600 ಚದರ ಅಡಿ ಇದೆ. ಏಳು ಮಂದಿ ಟೈಲರ್ಗಳು, 15 ಸಹಾಯಕರು ಇಬ್ಬರು ಕಲಾವಿದರ ನೆರವಿನಿಂದ ರೂಪಿಸಿದ್ದಾರೆ.</p>.<p><strong>ಕ್ಲಾಕ್ ಟವರ್ನಲ್ಲಿ ಧ್ವಜಾರೋಹಣ:</strong> ಇನ್ನೊಂದೆಡೆ, ಕೆಲ ದಿನಗಳ ಹಿಂದೆ ಧ್ವಜಾರೋಹಣ ಸಂಬಂಧ ವಿವಾದಕ್ಕೆ ಕಾರಣವಾಗಿದ್ದ ಇಲ್ಲಿ ಬಿಗಿ ಭದ್ರತೆಯಲ್ಲಿ ಧ್ವಜಾರೋಹಣ ಮಾಡಲಾಯಿತು.</p>.<p><strong>9 ಕಿ.ಮೀ. ಉದ್ದದ ಧ್ವಜ</strong><br /><strong>ಕಲಘಟಗಿ (ಧಾರವಾಡ ಜಿಲ್ಲೆ):</strong> ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ9 ಕಿ.ಮೀ. ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಗಮನಸೆಳೆಯಿತು.</p>.<p>ಸಂತೋಷ ಲಾಡ್ ಪ್ರತಿಷ್ಠಾನ ಕಾರ್ಯಕ್ರಮ ಸಂಘಟಿಸಿದ್ದು,12 ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಗೆ ಸಾಥ್ ನೀಡಿದರು.</p>.<p>ಈ ಮೆರವಣಿಗೆಯು ಲಂಡನ್ನ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಸೇರಿದೆ. 9 ಸಾವಿರ ಮೀಟರ್ ಉದ್ದ, 9 ಅಡಿ ಅಗಲದ ತ್ರಿವರ್ಣ ಧ್ವಜವನ್ನು 50 ಸಾವಿರ ಜನ ಹಿಡಿದು ಸಾಗಿದರು ಎಂದು ಪ್ರತಿಷ್ಠಾನಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.</p>.<p><strong>ಎತ್ತರದ ಸ್ತಂಭದಲ್ಲಿ ಹಾರಿದ ಧ್ವಜ</strong><br /><strong>ಹೊಸಪೇಟೆ (ವಿಜಯನಗರ):</strong> ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಿಸಿ, ತ್ರಿವರ್ಣ ಧ್ವಜಾರೋಹಣ ಮಾಡಿದ್ದು, ಈ ಮೂಲಕ ವಿಜಯನಗರ ಜಿಲ್ಲೆ ಹೊಸ ದಾಖಲೆ ಬರೆಯಿತು.</p>.<p>ಪ್ರವಾಸೋದ್ಯಮ ಇಲಾಖೆಯ ₹6 ಕೋಟಿ ಅನುದಾನದಲ್ಲಿ ಮುನ್ಸಿಪಲ್ ಮೈದಾನದಲ್ಲಿ ನಿರ್ಮಿಸಿದ್ದ 405 ಅಡಿ ಎತ್ತರದ ಸ್ತಂಭದಲ್ಲಿ 120X80 ಅಳತೆ ರಾಷ್ಟ್ರಧ್ವಜ ಹಾರಿತು.</p>.<p>ಬೆಳಿಗ್ಗೆ 5ಕ್ಕೆ ಪ್ರಾಯೋಗಿಕವಾಗಿ ಹಾರಿಸಿದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಚಿತ್ರದುರ್ಗದ ಜ್ಯೋತಿರಾಜ್ ಧ್ವಜಸ್ತಂಭದ ಒಳಗೆ 150 ಅಡಿ ಎತ್ತರ ಹೋಗಿ, ಗಂಟಿಕ್ಕಿಕೊಂಡಿದ್ದ ಹಗ್ಗ ಸರಿಪಡಿಸಿದ್ದು, ಬಳಿಕ ಧ್ವಜ ಹಾರಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ಉದ್ದಗಲಕ್ಕೂ ಸೋಮವಾರ ಅಮೃತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮೇಳೈಸಿದ್ದು, ದೇಶಭಕ್ತಿ ಗೀತೆಗಳ ಗಾಯನ, ಪಥ ಸಂಚಲನ, ಬೃಹತ್ ತ್ರಿವರ್ಣ ಧ್ವಜಗಳ ಪ್ರಸ್ತುತಿ ಗಮನಸೆಳೆಯಿತು.</p>.<p>ಕೋಲಾರದಲ್ಲಿ ಹೆಲಿಕಾಪ್ಟರ್ ಬಳಸಿ ಧ್ವಜಕ್ಕೆ ಪುಷ್ಪವೃಷ್ಟಿ ಮಾಡಿದರೆ, ಹೆಚ್ಚಿನ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಕಲಾ ತಂಡಗಳು ಮೆರುಗು ಹೆಚ್ಚಿಸಿದವು. ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.</p>.<p><strong>ಹಾರದ ರಾಷ್ಟ್ರಧ್ವಜ (ಬಾಗಲಕೋಟೆ ವರದಿ):</strong> ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಧ್ವಜಕ್ಕೆ ಕಟ್ಟಿದ್ದ ಹಗ್ಗದ ಗಂಟು ಬಿಚ್ಚದೆ ಧ್ಚಜ ಹಾರಲಿಲ್ಲ.</p>.<p>ಹಲವಾರು ಬಾರಿ ಹಗ್ಗ ಎಳೆದರೂ ಧ್ವಜ ಬಿಚ್ಚಲಿಲ್ಲ. ಕೊನೆಗೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಧ್ವಜಕ್ಕೆ ಕಟ್ಟಿದ್ದ ಹಗ್ಗ ಸರಿಪಡಿಸಿ ಮತ್ತೆ ಧ್ವಜ ಏರಿಸಲಾಯಿತು. ಸಚಿವರು ತಮ್ಮ ಭಾಷಣದಲ್ಲಿ ನೆಹರೂ ಸೇವೆ ಸ್ಮರಿಸಿದರು.</p>.<p><strong>ಪಥಸಂಚಲನ ಮೊಟಕು– ವಿದ್ಯಾರ್ಥಿಗಳ ಆಕ್ರೋಶ:</strong> (ಮಂಡ್ಯ ವರದಿ): ಸಚಿವ ಅಶೋಕ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಮೊಟಕುಗೊಳಿಸಲು ಸೂಚಿಸಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಯಿತು.</p>.<p>ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಬೇಕು ಎಂದು ಸಚಿವರು ಕಾರಣ ನೀಡಿದ್ದರು. ‘15 ದಿನದಿಂದ ತಾಲೀಮು ನಡೆಸಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಇಲ್ಲವೇ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.</p>.<p><strong>ಕೆರೆಯಲ್ಲಿ ರಾಷ್ಟ್ರ ಧ್ವಜಾರೋಹಣ (ಮಂಡ್ಯ ವರದಿ):</strong> ಕೆ.ಆರ್.ಪೇಟೆಯದೇವೀರಮ್ಮಣಿ ಕೆರೆ ಮಧ್ಯೆ ಗಂಗಾಪರಮೇಶ್ವರಿ ಮೀನುಗಾರಿಕೆ ಸಂಘದಿಂದ ಧ್ವಜಾರೋಹಣ ಮಾಡಲಾಯಿತು. ತಹಶೀಲ್ದಾರ್ ರೂಪಾ ತೆಪ್ಪದಲ್ಲಿ ತೆರಳಿ ವಂದನೆ ಸಲ್ಲಿಸಿದರು.</p>.<p><strong>ತ್ರಿವರ್ಣ ಧ್ವಜ ವಿರೂಪ: ಮೂವರು ವಶಕ್ಕೆ</strong><br /><strong>ಮಲೇಬೆನ್ನೂರು (ದಾವಣಗೆರೆ ಜಿಲ್ಲೆ):</strong> ಪಟ್ಟಣದ ಜಿಗಳಿ ವೃತ್ತದಲ್ಲಿ ಸೋಮವಾರ ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿ ಬೈಕ್ನಲ್ಲಿ ಮೆರವಣಿಗೆ ನಡೆಸಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜಾಲತಾಣಗಳಲ್ಲಿ ಈ ಚಿತ್ರ ಹರಿದಾಡುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.</p>.<p><strong>ಕೋಲಾರ: ಬೃಹತ್ ಧ್ವಜ ಪ್ರದರ್ಶನ: (ಕೋಲಾರ ವರದಿ):</strong> ದೇಶದಲ್ಲೇ ಅತಿ ದೊಡ್ಡದು ಎನ್ನಲಾದ 205x630 ಅಡಿ ವಿಸ್ತೀರ್ಣದ ತ್ರಿವರ್ಣಧ್ವಜವನ್ನು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾಯಿತು. ಧ್ವಜಕ್ಕೆ ರಕ್ಷಣಾ ಪಡೆಯು ಹೆಲಿಕಾಪ್ಟರ್ ಮೂಲಕ ಎರಡು ಸುತ್ತು ಪುಷ್ಪವೃಷ್ಟಿಗರೆಯಿತು.</p>.<p>ಧ್ವಜಕ್ಕೆ 12,800 ಮೀಟರ್ ಬಟ್ಟೆ ಬಳಸಿದ್ದು, 3,300 ಕೆ.ಜಿ ತೂಕ ಇದೆ. 1.29 ಲಕ್ಷ ಚದರ ಅಡಿ ವಿಸ್ತೀರ್ಣದ ಧ್ವಜದಲ್ಲಿನ ಅಶೋಕ ಚಕ್ರವೇ 3,600 ಚದರ ಅಡಿ ಇದೆ. ಏಳು ಮಂದಿ ಟೈಲರ್ಗಳು, 15 ಸಹಾಯಕರು ಇಬ್ಬರು ಕಲಾವಿದರ ನೆರವಿನಿಂದ ರೂಪಿಸಿದ್ದಾರೆ.</p>.<p><strong>ಕ್ಲಾಕ್ ಟವರ್ನಲ್ಲಿ ಧ್ವಜಾರೋಹಣ:</strong> ಇನ್ನೊಂದೆಡೆ, ಕೆಲ ದಿನಗಳ ಹಿಂದೆ ಧ್ವಜಾರೋಹಣ ಸಂಬಂಧ ವಿವಾದಕ್ಕೆ ಕಾರಣವಾಗಿದ್ದ ಇಲ್ಲಿ ಬಿಗಿ ಭದ್ರತೆಯಲ್ಲಿ ಧ್ವಜಾರೋಹಣ ಮಾಡಲಾಯಿತು.</p>.<p><strong>9 ಕಿ.ಮೀ. ಉದ್ದದ ಧ್ವಜ</strong><br /><strong>ಕಲಘಟಗಿ (ಧಾರವಾಡ ಜಿಲ್ಲೆ):</strong> ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ9 ಕಿ.ಮೀ. ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಗಮನಸೆಳೆಯಿತು.</p>.<p>ಸಂತೋಷ ಲಾಡ್ ಪ್ರತಿಷ್ಠಾನ ಕಾರ್ಯಕ್ರಮ ಸಂಘಟಿಸಿದ್ದು,12 ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಗೆ ಸಾಥ್ ನೀಡಿದರು.</p>.<p>ಈ ಮೆರವಣಿಗೆಯು ಲಂಡನ್ನ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಸೇರಿದೆ. 9 ಸಾವಿರ ಮೀಟರ್ ಉದ್ದ, 9 ಅಡಿ ಅಗಲದ ತ್ರಿವರ್ಣ ಧ್ವಜವನ್ನು 50 ಸಾವಿರ ಜನ ಹಿಡಿದು ಸಾಗಿದರು ಎಂದು ಪ್ರತಿಷ್ಠಾನಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.</p>.<p><strong>ಎತ್ತರದ ಸ್ತಂಭದಲ್ಲಿ ಹಾರಿದ ಧ್ವಜ</strong><br /><strong>ಹೊಸಪೇಟೆ (ವಿಜಯನಗರ):</strong> ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಿಸಿ, ತ್ರಿವರ್ಣ ಧ್ವಜಾರೋಹಣ ಮಾಡಿದ್ದು, ಈ ಮೂಲಕ ವಿಜಯನಗರ ಜಿಲ್ಲೆ ಹೊಸ ದಾಖಲೆ ಬರೆಯಿತು.</p>.<p>ಪ್ರವಾಸೋದ್ಯಮ ಇಲಾಖೆಯ ₹6 ಕೋಟಿ ಅನುದಾನದಲ್ಲಿ ಮುನ್ಸಿಪಲ್ ಮೈದಾನದಲ್ಲಿ ನಿರ್ಮಿಸಿದ್ದ 405 ಅಡಿ ಎತ್ತರದ ಸ್ತಂಭದಲ್ಲಿ 120X80 ಅಳತೆ ರಾಷ್ಟ್ರಧ್ವಜ ಹಾರಿತು.</p>.<p>ಬೆಳಿಗ್ಗೆ 5ಕ್ಕೆ ಪ್ರಾಯೋಗಿಕವಾಗಿ ಹಾರಿಸಿದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಚಿತ್ರದುರ್ಗದ ಜ್ಯೋತಿರಾಜ್ ಧ್ವಜಸ್ತಂಭದ ಒಳಗೆ 150 ಅಡಿ ಎತ್ತರ ಹೋಗಿ, ಗಂಟಿಕ್ಕಿಕೊಂಡಿದ್ದ ಹಗ್ಗ ಸರಿಪಡಿಸಿದ್ದು, ಬಳಿಕ ಧ್ವಜ ಹಾರಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>