ಪೈಪೋಟಿ: ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದು, ಈಗಾಗಲೇ ಕೆಲವರು ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಮೊದಲು ಉತ್ಸಾಹ ತೋರಿದ್ದ ಕೆಲ ಸಾಹಿತಿಗಳು ಚುನಾವಣಾ ವೆಚ್ಚ, ವಯೋಸಹಜ ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಹಿಂದೇಟು ಹಾಕಿದ್ದಾರೆ. ದೂರದರ್ಶನದ ನಿವೃತ್ತ ಮಹಾ ನಿರ್ದೇಶಕ ಮಹೇಶ್ ಜೋಶಿ, ಕನ್ನಡ ಪರ ಹೋರಾಟಗಾರರಾದ ವ.ಚ. ಚನ್ನೇಗೌಡ, ಸಿ.ಕೆ. ರಾಮೇಗೌಡ, ಕೊಪ್ಪಳದ ಶೇಖರ್ಗೌಡ ಮಾಲಿ ಪಾಟೀಲ್, ಸಂಗಮೇಶ ಬಾದವಾಡಗಿ, ಮಾಯಣ್ಣ ಅವರು ಸ್ಪರ್ಧೆಗೆ ಸಿದ್ಧತೆ ಪ್ರಾರಂಭಿಸಿದ್ದಾರೆ. ಮಹಿಳೆಯೊಬ್ಬರು ಅಧ್ಯಕ್ಷರಾಗಬೇಕೆಂಬ ಕೂಗು ಕೂಡ ಸಾಂಸ್ಕೃತಿಕ ವಲಯದಲ್ಲಿ ಕೇಳಿ ಬಂದಿದೆ.