<p><strong>ಚಿಂತಾಮಣಿ:</strong> ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಯೋಗಿನಾರೇಯಣ ಯತೀಂದ್ರ ಮಠದಲ್ಲಿ ಜು.14ರಿಂದ 16ರವರೆಗೆ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ.</p>.<p>ನಿರಂತರ 72 ಗಂಟೆ ಕೈವಾರದಲ್ಲಿ ನಾದಸುಧೆ ಹರಿಯಲಿದೆ. ಸ್ಥಳೀಯ ತಂಡಗಳು, ರಾಜ್ಯದ ಪ್ರಸಿದ್ಧ ಸಂಗೀತಗಾರರು, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಮಹಾರಾಷ್ಟ್ರ ಹಾಗೂ ಶ್ರೀಲಂಕಾ ದೇಶದ ಸಂಗೀತಗಾರರು ಕಛೇರಿ ನೀಡುವರು.</p>.<p>14ರಂದು ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ ನೇತೃತ್ವದ ತಂಡ ತಾತಯ್ಯನವರ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಲಿದೆ.</p>.<p>ಯೋಗಿನಾರೇಯಣ ಟ್ರಸ್ಟ್ 20 ವರ್ಷಗಳಿಂದ ಈ ನಿರಂತರ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ತಂಡಗಳಿಗೆ ತಲಾ 15 ನಿಮಿಷ ಕಾರ್ಯಕ್ರಮ ನೀಡಲು ಅವಕಾಶ ಇದೆ. ಸಂಜೆ 5ರ ನಂತರ ಪ್ರಸಿದ್ಧರು ಕಛೇರಿ ನಡೆಸಿಕೊಡುವರು. ರಾತ್ರಿಪೂರ್ತಿ ತತ್ವಪದ, ಭಜನೆ ಜರುಗಲಿದೆ.</p>.<p>ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಸಂಗೀತಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನುವರು ಕಾರ್ಯಕ್ರಮ ಸಂಘಟಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಯೋಗಿನಾರೇಯಣ ಯತೀಂದ್ರ ಮಠದಲ್ಲಿ ಜು.14ರಿಂದ 16ರವರೆಗೆ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ.</p>.<p>ನಿರಂತರ 72 ಗಂಟೆ ಕೈವಾರದಲ್ಲಿ ನಾದಸುಧೆ ಹರಿಯಲಿದೆ. ಸ್ಥಳೀಯ ತಂಡಗಳು, ರಾಜ್ಯದ ಪ್ರಸಿದ್ಧ ಸಂಗೀತಗಾರರು, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಮಹಾರಾಷ್ಟ್ರ ಹಾಗೂ ಶ್ರೀಲಂಕಾ ದೇಶದ ಸಂಗೀತಗಾರರು ಕಛೇರಿ ನೀಡುವರು.</p>.<p>14ರಂದು ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ ನೇತೃತ್ವದ ತಂಡ ತಾತಯ್ಯನವರ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಲಿದೆ.</p>.<p>ಯೋಗಿನಾರೇಯಣ ಟ್ರಸ್ಟ್ 20 ವರ್ಷಗಳಿಂದ ಈ ನಿರಂತರ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ತಂಡಗಳಿಗೆ ತಲಾ 15 ನಿಮಿಷ ಕಾರ್ಯಕ್ರಮ ನೀಡಲು ಅವಕಾಶ ಇದೆ. ಸಂಜೆ 5ರ ನಂತರ ಪ್ರಸಿದ್ಧರು ಕಛೇರಿ ನಡೆಸಿಕೊಡುವರು. ರಾತ್ರಿಪೂರ್ತಿ ತತ್ವಪದ, ಭಜನೆ ಜರುಗಲಿದೆ.</p>.<p>ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಸಂಗೀತಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನುವರು ಕಾರ್ಯಕ್ರಮ ಸಂಘಟಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>