ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ದತ್ತಿನಿಧಿಯ ‘ಕರ್ನಾಟಕ ಏಕೀಕರಣ ಸಾಂಸ್ಕೃತಿಕ ಪ್ರಶಸ್ತಿ'ಗೆ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ, ಪಂಡಿತ ಯಜ್ಞನಾರಾಯಣ ಉಡುಪ ದತ್ತಿನಿಧಿಯ ‘ವಿದ್ವತ್ಪರಂಪರಾ ಪ್ರಶಸ್ತಿ'ಗೆ ಡಾ.ಎಸ್.ಆರ್. ವಿಘ್ನರಾಜ, ಡಾ.ಯು.ಪಿ.ಉಪಾಧ್ಯಾಯ ದತ್ತಿನಿಧಿಯ ‘ಸಂಶೋಧನಾ ಪ್ರಶಸ್ತಿ‘ಗೆ ಪುಟ್ಟು ಕುಲಕರ್ಣಿ, ಮೊಗಸಾಲೆ ಪ್ರತಿಷ್ಠಾನದ ‘ಕಾಂತಾವರ ಲಲಿತಕಲಾ ಪ್ರಶಸ್ತಿ'ಗೆ ಪಿ.ಎಸ್.ಪುಂಚಿತ್ತಾಯ ಹಾಗೂ ಸರೋಜಿನಿ ನಾಗಪ್ಪಯ್ಯ ದತ್ತಿನಿಧಿಯ ‘ಕಾಂತಾವರ ಸಾಹಿತ್ಯ ಪುರಸ್ಕಾರ’ ಶಾರದಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.