ರಾಜ್ಯದ ಹಲವೆಡೆ ಆಸ್ತಿ ಖರೀದಿ: ‘ಪ್ರಕರಣದ ಪ್ರಮುಖ ಆರೋಪಿ ಎನ್. ನಂಜುಂಡಯ್ಯನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ಸೊಸೈಟಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಸಿದ್ದೇಗೌಡ, ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪ್ರಶಾಂತ್ಕುಮಾರ್ ಎಚ್.ಡಿ., ನಿರ್ದೇಶಕರಾದ ವಿಜಯ್ಕುಮಾರ್, ನವೀನ್ಕುಮಾರ್, ಲಿಂಗರಾಜು ಮತ್ತು ಇತರರು ಸೇರಿಕೊಂಡು ಕೃತ್ಯ ಎಸಗಿರುವುದಾಗಿ ನಂಜುಂಡಯ್ಯ ತಪ್ಪೊಪ್ಪಿಗೆ ನೀಡಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.