’ಒಂದು ಗಂಟೆಯ ಕಾಲ ಮೇಕೆಗಳನ್ನು ದೇವಾಲಯದ ಮುಂದೆ ನಿಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಬಾಜಿಗೆ ಕರೆದಿದ್ದೇವೆ. ಆದರೆ ಜೆಡಿಎಸ್ ಅಥವಾ ಬಿಜೆಪಿ ಕಡೆಯಿಂದ ಯಾರೊಬ್ಬರೂ ಬಾಜಿಗೆ ಬಂದಿಲ್ಲ. ಬಾಜಿ ಕಟ್ಟುವವರಿಗೆ ಶನಿವಾರ ಬೆಳಿಗ್ಗೆ 8 ಗಂಟೆವರೆಗೂ ಅವಕಾಶ ಉಂಟು’ ಎಂದು ಕಾಂಗ್ರೆಸ್ ಕಾರ್ಯಕರ್ತರಾದ ಶಿವಕುಮಾರ್, ಶ್ರೀಕಂಠು, ರೇವಣ್ಣ, ಪ್ರೇಮಕುಮಾರ್ ಹೇಳಿದರು.