ಮಸೂದೆಯ ಮೇಲಿನ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ, ಬಸನಗೌಡ ಪಾಟೀಲ ಯತ್ನಾಳ, ಜೆಡಿಎಸ್ನ ಜಿ.ಟಿ. ದೇವೇಗೌಡ ಮತ್ತು ಜಿ.ಡಿ. ಹರೀಶ್ ಗೌಡ ಮೀಸಲಾತಿ ಪ್ರಸ್ತಾವವನ್ನು ಕೈಬಿಡುವಂತೆಯೂ ಆಗ್ರಹಿಸಿದರು. ಮಸೂದೆ ಮಂಡಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸದಸ್ಯರನ್ನು ಮನವೊಲಿಸುವ ಕಸರತ್ತು ನಡೆಸಿದರು. ಕೆಲವು ಬದಲಾವಣೆಗಳಿಗೆ ವಿರೋಧಪಕ್ಷಗಳ ಸದಸ್ಯರು ಪಟ್ಟು ಹಿಡಿದರು.