ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಬಿಜೆಪಿಯ ವಿ.ಸುನಿಲ್ಕುಮಾರ್, ಶಾಸಕ ಗೋಪಾಲಯ್ಯ ಅವರಿಗೆ ರಕ್ಷಣೆ ನೀಡಲು ಸಭಾಧ್ಯಕ್ಷರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಚ್ಚರಿ ಎಂದರೆ ಗೋಪಾಲಯ್ಯ ನಿನ್ನೆ ರಾತ್ರಿ ದೂರು ನೀಡಿದ್ದರೂ, ಬೆದರಿಕೆ ಹಾಕಿದ ವ್ಯಕ್ತಿಯನ್ನು ಈವರೆಗೂ ಬಂಧಿಸಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿಯ ಇತರ ಸದಸ್ಯರೂ ಧ್ವನಿಗೂಡಿಸಿದರು.