ರಾಜ್ಯ ಮತ್ತು ರಾಷ್ಟ್ರ ‘ಕಾಂಗ್ರೆಸ್ ಮುಕ್ತ’ವಾಗುತ್ತದೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶ ಮುನ್ಸೂಚನೆಯಾಗಿದೆ. ಮತದಾರರು ‘ಅನರ್ಹತೆ’ ಕಿತ್ತು ಹಾಕಿ ಜನತಾ ನ್ಯಾಯಾಲಯದಲ್ಲಿ ‘ಅರ್ಹ’ರನ್ನಾಗಿ ಮಾಡಿದ್ದಾರೆ. ಯು.ಬಿ. ಬಣಕಾರ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತು ಕೊಟ್ಟ ಹಾಗೆ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡಿ ಗೆಲುವಿಗೆ ಶ್ರಮಿಸಿದ್ದಾರೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಪರ್ವ ಮಾಡಲು ಶಪಥ ಮಾಡುತ್ತೇನೆ ಎಂದು ಭರವಸೆ ನೀಡಿದರು.