ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಿಎಂಎ ಸಮ್ಮೇಳನ ಇಂದಿನಿಂದ

Last Updated 24 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಘಟಕಗಳ ಸಹಯೋಗದಲ್ಲಿ ಆಯೋಜಿಸಿರುವ ಕರ್ನಾಟಕ ಸಿಎಂಎ ಸಮ್ಮೇಳನ ಫೆ. 25 ಮತ್ತು 26ರಂದು ಬೆಂಗಳೂರಿನ ಎಫ್‌ಕೆಸಿಸಿಐ ಕಚೇರಿಯ ಸರ್‌.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿದೆ.

ಈ ಸಮ್ಮೇಳನವು ಫೆ. 25ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಯಾಗಲಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಮಾಜಿ ಸಂಸದ ಜನಾರ್ದನ ಸ್ವಾಮಿ, ನಿವೃತ್ತ ಐಆರ್‌ಎಸ್ ಅಧಿಕಾರಿ ಶ್ರೀನಿವಾಸ್ ಬಿದರಿ ಭಾಗವಹಿಸಲಿದ್ದಾರೆ.

ತಂತ್ರಜ್ಞಾನ, ಆರೋಗ್ಯ, ಸ್ಟಾರ್ಟ್‌ಅಪ್‌ ವಾತಾವರಣ
ದಲ್ಲಿ ವೃತ್ತಿಪರರ ಪಾತ್ರ, ಆರ್ಥಿಕ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ವಿಷಯಗಳ ಕುರಿತು ಎರಡೂ ದಿನ ಗೋಷ್ಠಿಗಳು ನಡೆಯಲಿವೆ. ಪರಿಣತರಾದ ನರಸಿಂಹನ್ ಇಳಂಗೋವನ್, ಪಿ. ತಿರುವೆಂಕಟಂ, ಅಭಿಷೇಕ್‌ ರತ್ಕಲ್, ಕಲ್ಮಂಜೆ ಗುರುರಾಜ ಆಚಾರ್ಯ, ಅದ್ವೈತ್ ಕುಲಕರ್ಣಿ, ಶ್ರೀಕಾಂತ್, ಕೆ.ಗೋಪಿನಾಥ್, ಮೋಹನ್‌ ಕುಮಾರ್‌ ಬಿ.ಎನ್, ರೂಪಾ ಡಿ, ವೆಂಕಟರಾಮನ್ ಅವರು ಗೋಷ್ಠಿಗಳಲ್ಲಿ ವಿಷಯಗಳನ್ನು ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT