ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಬಾರಿ ಟಿಕೆಟ್ ಭರವಸೆ ನೀಡಿದ್ದರೂ, ಬಿಜೆಪಿಯ ಕೆಲವು ನಾಯಕರ ಗೊಂದಲಕಾರಿ ಹೇಳಿಕೆಗಳಿಂದ, ಟಿಕೆಟ್ ಸಿಗುವ ಬಗ್ಗೆಅನರ್ಹ ಶಾಸಕರಲ್ಲಿ ಸಂದೇಹ ಮೂಡಿತ್ತು. ವರಿಷ್ಠರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಮತ್ತು ಟಿಕೆಟ್ ಬಗ್ಗೆ ಇದ್ದ ಸಂದೇಹ ಬಗೆಹರಿಸಿಕೊಳ್ಳಲು ಈ ಭೇಟಿಯ ವ್ಯವಸ್ಥೆ ಆಗಿತ್ತು ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ದೂರವಾಣಿ ಮೂಲಕ ಸಂತೋಷ್ ಜತೆ ಮಾತುಕತೆ ನಡೆಸಿದರು.