‘ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ, ಯಡಿಯೂರಪ್ಪ ಅವರ ಜಾಗವನ್ನು ತುಂಬಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬಳಿಕ ಲಿಂಗಾಯತ ಸಮುದಾಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವನ್ನೇನೂ ಬಿಜೆಪಿ ಮಾಡಿಲ್ಲ. ವೀರಶೈವ– ಲಿಂಗಾಯತ, ಪರಿಶಿಷ್ಟ ಜಾತಿ (ಎಡ), ಪರಿಶಿಷ್ಟವರ್ಗ, ಇತರ ಹಿಂದುಳಿದ ವರ್ಗದ ಮತಗಳನ್ನು ಭದ್ರಪಡಿಸಿಕೊಂಡರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಚರ್ಚೆಯೂ ಪಕ್ಷದಲ್ಲಿ ನಡೆದಿದೆ’ ಎಂದು ತಿಳಿಸಿದರು.