<p><strong>ಬೆಂಗಳೂರು:</strong> ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇಕಡ 1ರಷ್ಟು ಅಗ್ನಿ ಸೆಸ್ ವಿಧಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ–2025’ಕ್ಕೆ ವಿಧಾನ ಮಂಡಲದ ಉಭಯಸದನಗಳ ಅನುಮೋದನೆ ದೊರೆತಿದೆ.</p>.<p>21 ಮೀಟರ್ಗಿಂತಲೂ ಹೆಚ್ಚು ಎತ್ತರವಿರುವ ಬಹುಮಹಡಿ ಕಟ್ಟಡಗಳಿಗೆ, ಅವುಗಳ ತೆರಿಗೆಯ ಮೇಲೆ ಶೇ1ರಷ್ಟು ಅಗ್ನಿ ಸೆಸ್ ವಿಧಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಈ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ, ಅದು ಕಾಯ್ದೆಯಾಗಲಿದೆ. ನಂತರ ಬಹುಮಹಡಿ ಕಟ್ಟಡಗಳ ಮಾಲೀಕರು ಕಟ್ಟಬೇಕಾದ ತೆರಿಗೆಯ ಹೊರೆ ಹೆಚ್ಚಲಿದೆ.</p>.<p>ಗೃಹ ಸಚಿವ ಜಿ.ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಗುರುವಾರ ಈ ಮಸೂದೆಯನ್ನು ಮಂಡಿಸಿದರು. ಅಗ್ನಿ ಸೆಸ್ ವಿಧಿಸುವುದಕ್ಕೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಈ ಸರ್ಕಾರವು ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಗಾಳಿಗೆ ತೆರಿಗೆ ವಿಧಿಸುವುದೊಂದೇ ಬಾಕಿ’ ಎಂದರು.</p>.<p>ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಪರಮೇಶ್ವರ, ‘ಬಹುಮಹಡಿ ಕಟ್ಟಡಗಳಿಗೆ ಅಗ್ನಿ ಸೆಸ್ ವಿಧಿಸುತ್ತಿಲ್ಲ. ಈ ಕ್ರಮ ಇಲ್ಲದೇ ಇರುವುದರಿಂದ ಸಂಭಾವ್ಯ ಆದಾಯ ಖೋತಾ ಆಗುತ್ತಿದೆ ಎಂದು ಭಾರತದ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿ ಆರು ಬಾರಿ ಪತ್ರ ಬರೆದಿದ್ದರು. ಅದರ ಆಧಾರದಲ್ಲಿ ಅಗ್ನಿ ಸೆಸ್ ವಿಧಿಸುತ್ತಿದ್ದೇವೆ’ ಎಂದರು.</p>.<p><strong>ಇದ್ದರೂ ಇರದಂತಾದ ಅಗ್ನಿಶಾಮಕ ವಾಹನಗಳು</strong></p><p> ‘ಅಗ್ನಿಶಾಮಕ ದಳದ ಮಂಗಳೂರು ಘಟಕದಲ್ಲಿ ಐದು ಅಗ್ನಿಶಾಮಕ ವಾಹನಗಳಿವೆ. ಆದರೆ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಘಟಕದ ಎದುರಿನ ರಸ್ತೆಯಲ್ಲಿ ಬೆಂಕಿ ಬಿದ್ದರೂ ಆ ವಾಹನಗಳನ್ನು ರಸ್ತೆಗೆ ತರುವಂತಿಲ್ಲ...’ ಎಂದು ಅಗ್ನಿ ಸೆಸ್ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಐವನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು. </p><p>ಬಿಜೆಪಿ ಮತ್ತು ಜೆಡಿಎಸ್ನ ಕೆಲ ಸದಸ್ಯರೂ ಇದಕ್ಕೆ ದನಿಗೂಡಿಸಿದರು. ಈ ಬಗ್ಗೆ ಉತ್ತರಿಸಿದ ಪರಮೇಶ್ವರ ‘15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ವಾಹನಗಳು 15 ವರ್ಷದಲ್ಲಿ 1000 ಕಿ.ಮೀ. ದೂರವನ್ನೂ ಕ್ರಮಿಸಿಲ್ಲ ಅಷ್ಟು ಹೊಸತಾಗಿವೆ’ ಎಂದರು. ‘ಸುಸ್ಥಿತಿಯಲ್ಲಿರುವ ಈ ವಾಹನಗಳು ಕೇಂದ್ರ ಸರ್ಕಾರದ ನೀತಿಯಿಂದ ನಿರುಪಯುಕ್ತವಾಗಿವೆ. ಈ ವಾಹನಗಳಿಗಾದರೂ ವಿನಾಯತಿ ನೀಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ವಿನಾಯತಿಗೆ ಅವರು ಒಪ್ಪಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇಕಡ 1ರಷ್ಟು ಅಗ್ನಿ ಸೆಸ್ ವಿಧಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ–2025’ಕ್ಕೆ ವಿಧಾನ ಮಂಡಲದ ಉಭಯಸದನಗಳ ಅನುಮೋದನೆ ದೊರೆತಿದೆ.</p>.<p>21 ಮೀಟರ್ಗಿಂತಲೂ ಹೆಚ್ಚು ಎತ್ತರವಿರುವ ಬಹುಮಹಡಿ ಕಟ್ಟಡಗಳಿಗೆ, ಅವುಗಳ ತೆರಿಗೆಯ ಮೇಲೆ ಶೇ1ರಷ್ಟು ಅಗ್ನಿ ಸೆಸ್ ವಿಧಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಈ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ, ಅದು ಕಾಯ್ದೆಯಾಗಲಿದೆ. ನಂತರ ಬಹುಮಹಡಿ ಕಟ್ಟಡಗಳ ಮಾಲೀಕರು ಕಟ್ಟಬೇಕಾದ ತೆರಿಗೆಯ ಹೊರೆ ಹೆಚ್ಚಲಿದೆ.</p>.<p>ಗೃಹ ಸಚಿವ ಜಿ.ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಗುರುವಾರ ಈ ಮಸೂದೆಯನ್ನು ಮಂಡಿಸಿದರು. ಅಗ್ನಿ ಸೆಸ್ ವಿಧಿಸುವುದಕ್ಕೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಈ ಸರ್ಕಾರವು ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಗಾಳಿಗೆ ತೆರಿಗೆ ವಿಧಿಸುವುದೊಂದೇ ಬಾಕಿ’ ಎಂದರು.</p>.<p>ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಪರಮೇಶ್ವರ, ‘ಬಹುಮಹಡಿ ಕಟ್ಟಡಗಳಿಗೆ ಅಗ್ನಿ ಸೆಸ್ ವಿಧಿಸುತ್ತಿಲ್ಲ. ಈ ಕ್ರಮ ಇಲ್ಲದೇ ಇರುವುದರಿಂದ ಸಂಭಾವ್ಯ ಆದಾಯ ಖೋತಾ ಆಗುತ್ತಿದೆ ಎಂದು ಭಾರತದ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿ ಆರು ಬಾರಿ ಪತ್ರ ಬರೆದಿದ್ದರು. ಅದರ ಆಧಾರದಲ್ಲಿ ಅಗ್ನಿ ಸೆಸ್ ವಿಧಿಸುತ್ತಿದ್ದೇವೆ’ ಎಂದರು.</p>.<p><strong>ಇದ್ದರೂ ಇರದಂತಾದ ಅಗ್ನಿಶಾಮಕ ವಾಹನಗಳು</strong></p><p> ‘ಅಗ್ನಿಶಾಮಕ ದಳದ ಮಂಗಳೂರು ಘಟಕದಲ್ಲಿ ಐದು ಅಗ್ನಿಶಾಮಕ ವಾಹನಗಳಿವೆ. ಆದರೆ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಘಟಕದ ಎದುರಿನ ರಸ್ತೆಯಲ್ಲಿ ಬೆಂಕಿ ಬಿದ್ದರೂ ಆ ವಾಹನಗಳನ್ನು ರಸ್ತೆಗೆ ತರುವಂತಿಲ್ಲ...’ ಎಂದು ಅಗ್ನಿ ಸೆಸ್ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಐವನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು. </p><p>ಬಿಜೆಪಿ ಮತ್ತು ಜೆಡಿಎಸ್ನ ಕೆಲ ಸದಸ್ಯರೂ ಇದಕ್ಕೆ ದನಿಗೂಡಿಸಿದರು. ಈ ಬಗ್ಗೆ ಉತ್ತರಿಸಿದ ಪರಮೇಶ್ವರ ‘15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ವಾಹನಗಳು 15 ವರ್ಷದಲ್ಲಿ 1000 ಕಿ.ಮೀ. ದೂರವನ್ನೂ ಕ್ರಮಿಸಿಲ್ಲ ಅಷ್ಟು ಹೊಸತಾಗಿವೆ’ ಎಂದರು. ‘ಸುಸ್ಥಿತಿಯಲ್ಲಿರುವ ಈ ವಾಹನಗಳು ಕೇಂದ್ರ ಸರ್ಕಾರದ ನೀತಿಯಿಂದ ನಿರುಪಯುಕ್ತವಾಗಿವೆ. ಈ ವಾಹನಗಳಿಗಾದರೂ ವಿನಾಯತಿ ನೀಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ವಿನಾಯತಿಗೆ ಅವರು ಒಪ್ಪಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>