ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಎಸ್.ಪಿ. ಯತೀಶ್ ಎನ್. ಮೊದಲಾದ ಅಧಿಕಾರಿಗಳು ಗ್ರಾಮಸ್ಥರನ್ನು ಪರಿಪರಿಯಾಗಿ ಕೇಳಿಕೊಂಡರೂ ಅವರು ಕಾಳಜಿ ಕೇಂದ್ರಕ್ಕೆ ತೆರಳಲು ಒಪ್ಪಲಿಲ್ಲ. ಅಲ್ಲಿದ್ದ ಹೆಂಗಸರು, ಯುವತಿಯರು ‘ನಾವು ಯಾವುದೇ ಕಾರಣಕ್ಕೂ ಆ ಊರಿಗೆ ಹೋಗುವುದಿಲ್ಲ. ಸತ್ತರೂ, ಕೆಟ್ಟರೂ ಇಲ್ಲೇ ಇರುತ್ತೇವೆ’ ಎಂದು ಹಟ ಹಿಡಿದು ಅಧಿಕಾರಿಗಳಿಗೆ ಬೆನ್ನು ತೋರಿಸಿ ನಿಲ್ಲುತ್ತಿದ್ದರು. ಹೆಣ್ಣು ಮಕ್ಕಳ ಮನ ಒಲಿಸುವಲ್ಲಿ ಊರಿನ ಹಿರಿಯರೂ ಸೋತು, ಕೊನೆಗೆ ಕೈ ಚೆಲ್ಲಿದರು.