ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಅಧಿಕಾರ ಹಸ್ತಾಂತರದ ಚರ್ಚೆ: ಬಜೆಟ್‌ ತಯಾರಿಯಲ್ಲಿ CM, 'ಸಮಯ'ದ ನಿರೀಕ್ಷೆಯಲ್ಲಿ DCM

ಶುರುವಾಯ್ತು ಮಾತಿನ ಸಮರ
Published : 7 ಫೆಬ್ರುವರಿ 2026, 19:30 IST
Last Updated : 7 ಫೆಬ್ರುವರಿ 2026, 19:30 IST
ADVERTISEMENT
ಫಾಲೋ ಮಾಡಿ
Comments
ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬಜೆಟ್‌ ತಯಾರಿಯಲ್ಲಿ ಸಿದ್ದರಾಮಯ್ಯ ತೊಡಗಿಕೊಂಡಿದ್ದರೆ, ‘ಮುಂದಿನದನ್ನು ಕಾಲವೇ ಹೇಳುತ್ತದೆ’ ಎಂಬ ನಂಬಿಕೆಯ ಮಾತುಗಳನ್ನು ಶಿವಕುಮಾರ್ ಪುನರುಚ್ಚರಿಸುತ್ತಿದ್ದಾರೆ. ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರ ಮಾತುಗಳು ಪಕ್ಷದಲ್ಲಿ ಅಂತರ್‌ಕಲಹದ ಕಿಡಿ ಹೊತ್ತಿಸಿವೆ. ನಾಯಕರ ಆಪ್ತರು ದಿನಕ್ಕೊಂದು ಹೇಳಿಕೆಯ ಬಾಣ ಬಿಡತೊಡಗಿದ್ದಾರೆ.
‘ಹೈಕಮಾಂಡ್ ಹೈಕಮಾಂಡೇ. ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಹೈಕಮಾಂಡ್ ಏನೂ ಹೇಳದೇ ಇರುವುದರಿಂದ ಮುಖ್ಯಮಂತ್ರಿ ಬದಲಾವಣೆ ಆಗಲ್ಲ ಎಂದರ್ಥ, ಅವರೇ ಮುಂದುವರಿಯಲಿದ್ದಾರೆ.
– ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ
'ಸಿದ್ದರಾಮಯ್ಯಗಿಂತ ಯತೀಂದ್ರ ಮೇಲೆ'
ಡಿಕೆಶಿ ಕೇಳಿದರೆ ಪ್ರಾಣ ಕೊಡುತ್ತೇವೆ: ಶಿವಗಂಗಾ
ನಾಯಕತ್ವ ಬದಲಾವಣೆ ಕುರಿತಂತೆ ಆಗಾಗ ಕೇಳಿ ಬರುತ್ತಿರುವ ವದಂತಿ ಕೇವಲ ಊಹಾಪೋಹ. ಅವೆಲ್ಲ ಅವರವರ ವೈಯಕ್ತಿಕ ಹೇಳಿಕೆಗಳು. ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ.
– ಸಲೀಂ ಅಹಮದ್, ಸರ್ಕಾರಿ ಮುಖ್ಯ ಸಚೇತಕ, ವಿಧಾನ ಪರಿಷತ್ತು
‘ಹೈಕಮಾಂಡ್ ಮೌನವೇ ಸೂಚನೆ’
ಯತೀಂದ್ರ ನೀಡುತ್ತಿರುವ ಹೇಳಿಕೆಗಳು ಅವರ ವಂಶಪಾರಂಪರ್ಯ ಅಧಿಕಾರದ ಪ್ರತೀಕ. ಮುಂದೆ ಕಾಂಗ್ರೆಸ್‌ನವರು  ರಸ್ತೆಗಳಲ್ಲಿ ಹೊಡೆದಾಡುವ ಸ್ಥಿತಿ ಬರುತ್ತದೆ. ಇದು ಅದರ ಮುನ್ಸೂಚನೆ.
– ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಡಿಕೆಶಿ ನಿಲುವಿಗೆ ಸೇಠ್‌ ಸಹಮತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT