ಸಣ್ಣ ವಯಸ್ಸಿನಲ್ಲಿಯೇ ಸಾಧನೆ ಮಾಡಿದವರನ್ನು ಗುರುತಿಸಿದರೆ ಇತರರಿಗೂ ಪ್ರೇರಣೆ ಆಗಲಿದೆ. ವಯಸ್ಸಿನ ಗಡಿಮಿತಿ ಬೇಡ. ಈ ಮಿತಿಹೇರಿ ಸರ್ಕಾರವು ತಪ್ಪು ಮಾಡಿದೆ. ಈ ಕುರಿತು ಹಿಂದಿನ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಸಚಿವರನ್ನು ಪ್ರಶ್ನಿಸಿದ್ದೆ ಎಂದರು.
ಇದುವರೆಗೂ ರಾಜ್ಯೋತ್ಸವ ಪಡೆದವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಪರ್ಕಿಸಿ ಅವರ ಕುರಿತು ಕೃತಿ ತರಬೇಕು. ಅವರ ಅನುಭವ ಹಾಗೂ ನಾಡು ಕಟ್ಟುವ ಬಗೆ ಕೃತಿಯಲ್ಲಿ ಇರಬೇಕು. ಸಾಹಿತಿಗಳು, ವಕೀಲರು, ಕವಿಗಳು, ವೈದ್ಯರು ಹಾಗೂ ಎಂಜಿನಿಯರ್ಗಳು ಸೇರಿ ನಾಡು ಕಟ್ಟೋಣ ಎಂದರು.