ಬರಗೂರು ಸಮಿತಿಯುಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆದಿತ್ತು. ಚಕ್ರತೀರ್ಥ ಸಮಿತಿ ಅದನ್ನು ಕಿತ್ತುಹಾಕಿದೆ. ಬದಲಾಗಿ ಬಿ.ಎನ್. ರಾವ್ ಅವರು ಸಂವಿಧಾನ ರಚನಾ ಚೌಕಟ್ಟು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಪ್ರತ್ಯೇಕವಾಗಿ ಬರೆದು, ಅಂಬೇಡ್ಕರ್ ಅವರ ಪಾತ್ರವನ್ನು ಗೌಣಗೊಳಿಸಲಾಗಿದೆ. ಅಂಬೇಡ್ಕರ್ ತಾಯಿ–ತಂದೆ ಇತ್ಯಾದಿ ವಿವರ ಕೈಬಿಡಲಾಗಿದೆ.
ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿಚಿತ್ರವನ್ನು ಕಿತ್ತುಹಾಕಿದ್ದೂ ಇದೇ ಚಕ್ರತೀರ್ಥ ಸಮಿತಿ. ಅಂಬೇಡ್ಕರ್, ಬುದ್ಧ ಗುರುವಿನ ಬಗ್ಗೆ ಇದ್ದ ಪದ್ಯಗಳಿಗೆ ಸಂಪೂರ್ಣ ಕತ್ತರಿ ಹಾಕಲಾಗಿದೆ. 6ನೇ ತರಗತಿ ಪಠ್ಯದಿಂದ ಬೌದ್ಧ ಧರ್ಮದ ಪಾಠ ತೆಗೆಯಲಾಗಿದೆ. ದಲಿತ ಲೇಖಕರ ಪಾಠಗಳನ್ನು ತೆಗೆದುಹಾಕಲಾಗಿದೆ. ಇಂತಹ ಕೃತ್ಯವನ್ನು ಸಮರ್ಥಿಸುವ ಶಿಕ್ಷಣ ಸಚಿವರೂ ದಲಿತ ವಿರೋಧಿ ಎಂದು ಆರೋಪಿಸಿದ್ದಾರೆ.