‘ಈ ತಾಣಗಳನ್ನು ಕಡೆಗಣಿಸಲಾಗಿತ್ತು. ಅವುಗಳ ನಿಜವಾದ ಮಹತ್ವವನ್ನು ಸಾರಲಿದ್ದೇವೆ. ಈ ತಾಣಗಳಿಗೆ ಉತ್ತಮ ಸಂಪರ್ಕ ಸೌಲಭ್ಯ ಕಲ್ಪಿಸುವುದು ಸದ್ಯದ ಸವಾಲು. ಪ್ರವಾಸೋದ್ಯಮ, ಸಂಸ್ಕೃತಿ, ಮುಜರಾಯಿ, ಪುರಾತತ್ವ, ಲೋಕೋಪಯೋಗಿ, ಸಣ್ಣ ನೀರಾವರಿ, ಮೂಲಸೌಕರ್ಯ ಮತ್ತು ಸಾರಿಗೆ ಇಲಾಖೆಗಳು ಈ ಯೋಜನೆಯ ಅನುಷ್ಠಾನಕ್ಕೆ ನೆರವಾಗಲಿವೆ. ಖಾಸಗಿ ಸಹಭಾಗಿತ್ವದ ಬಗ್ಗೆಯೂ ಸರ್ಕಾರ ಮುಕ್ತ ಚಿಂತನೆ ಹೊಂದಿದೆ’ ಎಂದರು.