‘ಜುಲೈ 6ರಿಂದ 10ರವರೆಗೆ ಉರುಸ್ ನಡೆಸಲು ಉದ್ದೇಶಿಸಲಾಗಿತ್ತು. ದೇಶದ ಎಲ್ಲೆಡೆ ಕೊರೊನಾ ಉಪಟಳ ಹೆಚ್ಚಿದೆ.ಉರುಸ್ಗೆ ದೇಶದ ಮೂಲೆಮೂಲೆಯಿಂದ ಅಪಾರ ಭಕ್ತರು ಬರುತ್ತಾರೆ. ಆಗ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಜನರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಉರುಸ್, ಗಂಧದ ಮೆರವಣಿಗೆ, ಸೂಫಿ ಸಂತರ ಗ್ರಂಥಗಳ ಮೆರವಣಿಗೆ ಹಾಗೂ ತಿಂಗಳವರೆಗೆ ನಡೆಯುವ ಜಾತ್ರೆಯನ್ನು ಕೈಬಿಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.