<p><strong>ಮಂಗಳೂರು:</strong> ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಗೆ ಜೆ.ಎಫ್.ಡಿಸೋಜ (ಸಾಹಿತ್ಯ), ಕೂಡ್ಲ ಆನಂದು ಮಧುಕರ್ ಶ್ಯಾನಭಾಗ್ (ಕಲೆ), ಡಾ.ವಸಂತ ಬಾಂದೇಕರ್ (ಜಾನಪದ) ಆಯ್ಕೆಯಾಗಿದ್ದಾರೆ.</p>.<p>ಪುಸ್ತಕ ಬಹುಮಾನಕ್ಕೆ ಲವಿ ಗಂಜಿಮಠ (ತಾರಾ ಲವೀನಾ ಫೆರ್ನಾಂಡಿಸ್) ಬರೆದ ‘ಚುಕ್ಲ್ಲಿಂ ಮೆಟಾಂ’ (ಕಾದಂಬರಿ), ರೋಶು ಬಜ್ಪೆ ಬರೆದ ‘ತೀಂತ್ ಜಾಲೆಂ ರಗತ್’ (ಕವನ ಸಂಕಲನ) ಹಾಗೂ ಜೆಯಲ್ ಮಂಜರಪಲ್ಕೆ ಬರೆದ ‘ಚಂದ್ರಮಾಚಿ ಖತಾಂ’ (ಸಣ್ಣಕತೆ) ಆಯ್ಕೆಯಾಗಿವೆ.</p>.<p>ಗೌರವ ಪ್ರಶಸ್ತಿ ತಲಾ ₹ 50 ಸಾವಿರ ಹಾಗೂ ಪುಸ್ತಕ ಬಹುಮಾನ ₹ 25 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಮಾರ್ಚ್ 8,9 ಮತ್ತು 10ರಂದು ದಾಂಡೇಲಿ, ಜೊಯಿಡಾ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ಸಾಹಿತ್ಯ ಅಕಾಡೆ<br />ಮಿಯ ಕಾರ್ಯಕ್ರಮಗಳು ನಡೆಯಲಿವೆ. 9 ಮತ್ತು 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಗೆ ಜೆ.ಎಫ್.ಡಿಸೋಜ (ಸಾಹಿತ್ಯ), ಕೂಡ್ಲ ಆನಂದು ಮಧುಕರ್ ಶ್ಯಾನಭಾಗ್ (ಕಲೆ), ಡಾ.ವಸಂತ ಬಾಂದೇಕರ್ (ಜಾನಪದ) ಆಯ್ಕೆಯಾಗಿದ್ದಾರೆ.</p>.<p>ಪುಸ್ತಕ ಬಹುಮಾನಕ್ಕೆ ಲವಿ ಗಂಜಿಮಠ (ತಾರಾ ಲವೀನಾ ಫೆರ್ನಾಂಡಿಸ್) ಬರೆದ ‘ಚುಕ್ಲ್ಲಿಂ ಮೆಟಾಂ’ (ಕಾದಂಬರಿ), ರೋಶು ಬಜ್ಪೆ ಬರೆದ ‘ತೀಂತ್ ಜಾಲೆಂ ರಗತ್’ (ಕವನ ಸಂಕಲನ) ಹಾಗೂ ಜೆಯಲ್ ಮಂಜರಪಲ್ಕೆ ಬರೆದ ‘ಚಂದ್ರಮಾಚಿ ಖತಾಂ’ (ಸಣ್ಣಕತೆ) ಆಯ್ಕೆಯಾಗಿವೆ.</p>.<p>ಗೌರವ ಪ್ರಶಸ್ತಿ ತಲಾ ₹ 50 ಸಾವಿರ ಹಾಗೂ ಪುಸ್ತಕ ಬಹುಮಾನ ₹ 25 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಮಾರ್ಚ್ 8,9 ಮತ್ತು 10ರಂದು ದಾಂಡೇಲಿ, ಜೊಯಿಡಾ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ಸಾಹಿತ್ಯ ಅಕಾಡೆ<br />ಮಿಯ ಕಾರ್ಯಕ್ರಮಗಳು ನಡೆಯಲಿವೆ. 9 ಮತ್ತು 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>