‘ನಿನ್ನ (ದೈವದ ಕುರಿತು) ಶಕ್ತಿಯ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಹಾಗಾಗಿ, ನಿನಗೆ ಈ ಕೋಲ ಏರ್ಪಡಿಸಿದ್ದೇನೆ. ಮುಂಬೈ ಮೂಲದ ಇಬ್ಬರು ಶೆಟ್ಟಿಗಳು ಕ್ರಮವಾಗಿ ₹ 12 ಕೋಟಿ ಹಾಗೂ ₹ 14 ಕೋಟಿ ಸಾಲವನ್ನಾಗಿ ಪಡೆದಿದ್ದಾರೆ. ಇದುವರೆಗೂ ಸಾಲ ಮರುಪಾವತಿ ಮಾಡಿಲ್ಲ. ಅದನ್ನು ನನಗೆ ಹಿಂದಿರುಗಿಸುವ ಜವಾಬ್ದಾರಿ ನಿನ್ನ ಮೇಲಿದೆ’ ಎಂದು ಸ್ವಾಮೀಜಿ ಹೇಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.