ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕಿಕೊಡಿ: ಶಿವಮೊಗ್ಗ ಎಸ್‌ಪಿಗೆ ಯುವಕನ ಮನವಿ

ಎಸ್ಪಿಗೆ ಪತ್ರ ಬರೆದ ಭದ್ರಾವತಿಯ ಯುವಕ
Last Updated 25 ನವೆಂಬರ್ 2022, 15:53 IST
ಅಕ್ಷರ ಗಾತ್ರ

ಶಿವಮೊಗ್ಗ: ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕಿಕೊಡುವಂತೆ ಭದ್ರಾವತಿಯ ನಿವಾಸಿ ಓ.ಎಸ್.ಪ್ರವೀಣ್ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಮಡಕಶಿರಾದ ನಿವಾಸಿ ಪ್ರವೀಣ್ ಪೋಷಕರು ಕೆಲಸದ ನಿಮಿತ್ತ ಭದ್ರಾವತಿಯಲ್ಲಿ ನೆಲೆಸಿದ್ದಾರೆ. ಪ್ರವೀಣ್ ತಾನು ಈ ಹಿಂದೆ ಬೆಂಗಳೂರಿನ ಸಾಫ್ಟ್‌ವೇರ್ ಹಾಗೂ ಚಿಟ್ಸ್ ಕಂಪನಿಗಳಲ್ಲಿ ಕೆಲಸ ಮಾಡಿರುವೆ. ಸದ್ಯ ಭದ್ರಾವತಿಯಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದು, ವಿದ್ಯಾರ್ಹತೆ ನಮೂದಿಸಿಲ್ಲ.

ತನ್ನ ಜಾತಿ, ವಿಳಾಸ ಉಲ್ಲೇಖಿಸಿದ್ದು, ನಾನು ವಧು ಅನ್ವೇಷಣೆಯಲ್ಲಿ ತೊಡಗಿದ್ದು, ಯಾರೂ ಸರಿಹೋಗದ ಆಗದ ಕಾರಣ ತಾವೇ ಹುಡುಗಿ ಹುಡುಕಿಕೊಡುವಂತೆ ಕೇಳಿದ್ದಾರೆ. ತನ್ನ ಬಗ್ಗೆ ಮಾಹಿತಿ ಪಡೆಯಲು ಭದ್ರಾವತಿ ನಗರಸಭೆ ಸದಸ್ಯರೊಬ್ಬರ ಹೆಸರು ಉಲ್ಲೇಖಿಸಿದ್ದಾರೆ.

’ಈ ವಿಚಾರ ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂಬ ಹಿಂಬರಹ ಸಂಬಂಧಿಸಿದ ವ್ಯಕ್ತಿಗೆ ಕೊಟ್ಟಿದ್ದೇವೆ. ಪತ್ರ ಬರೆದ ವ್ಯಕ್ತಿ ಮಾನಸಿಕ ಅಸ್ವಸ್ಥನೇ ಇಲ್ಲವೇ ಕೀಟಲೆ ಮಾಡಲು ಈ ರೀತಿ ಬರೆದಿದ್ದಾರೆಯೇ ಎಂದು ಪರಿಶೀಲಿಸಲು ಸಂಬಂಧಿಸಿದ ಪೊಲೀಸ್ ಠಾಣೆಗೆ ಸೂಚಿಸಿದ್ದೇನೆ. ದುರುದ್ದೇಶದಿಂದ ಆ ರೀತಿ ಬರೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು‘ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT