ಗದಗ: ಸಿದ್ಧಲಿಂಗ ಸ್ವಾಮೀಜಿ ಅವರ ಉತ್ತರಾಧಿಕಾರಿ ನೇಮಕ್ಕೆ ಸಂಬಂಧಿಸಿದಂತೆ ಮಠದ ಆಡಳಿತ ಮಂಡಳಿ ಶನಿವಾರ ತಡರಾತ್ರಿಯಾದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಮಠದ 20ನೇ ಪೀಠಾಧಿಪತಿ ಯಾರಾಗುತ್ತಾರೆ ಎನ್ನುವ ಗೊಂದಲ ಭಕ್ತರನ್ನೂ ಕಾಡುತ್ತಿದೆ. ಉತ್ತರಾಧಿಕಾರಿ ಸಂಬಂಧ ಸಿದ್ಧಲಿಂಗ ಸ್ವಾಮೀಜಿ ಅವರೂ ಯಾರೊಂದಿಗೂ ಏನನ್ನು ಹಂಚಿಕೊಂಡಿರಲಿಲ್ಲ.