ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುಶೀಲ್ ಕುಮಾರ್ ಮೋದಿ, ‘ಇತರ ಹಿಂದುಳಿದ ವರ್ಗಗಳ ಕುರಿತು ಕಾಂಗ್ರೆಸ್ ತೋರಿಸುತ್ತಿರುವ ಪ್ರೀತಿ ಒಂದು ನಾಟಕ’ ಎಂದು ವ್ಯಂಗ್ಯವಾಗಿ ಹೇಳಿದರು. ಉದಾಹರಣೆಯಾಗಿ, ಜಾತಿ ಗಣತಿ ವಿಷಯದಲ್ಲಿ ಶಿವಕುಮಾರ್ ತಳೆದ ನಿಲುವನ್ನು ಉಲ್ಲೇಖಿಸಿದರು. ‘ಜಾತಿ ಗಣತಿ ವರದಿಯನ್ನು ನಿಮ್ಮ ಸರ್ಕಾರ ಯಾವಾಗ ಬಹಿರಂಗಗೊಳಿಸುತ್ತದೆ ಎಂಬುದನ್ನು ಖರ್ಗೆಯವರೇ ಹೇಳಬೇಕು. ವರದಿ ಬಹಿರಂಗಗೊಳಿಸುವುದನ್ನು ವಿರೋಧಿಸಿ ಒಕ್ಕಲಿಗರ ಸಂಘ ಸಲ್ಲಿಸಿರುವ ಮನವಿಗೆ ಶಿವಕುಮಾರ್ ಸಹಿ ಹಾಕಿದ್ದಾರೆ’ ಎಂದೂ ಹೇಳಿದರು.