ಚಿಂಚೋಳಿ (ಕಲಬುರಗಿ ಜಿಲ್ಲೆ): ಬ್ಯಾರೇಜ್ ನೀರಿನಲ್ಲಿ ಈಜಲು ಹೋಗಿ ಯುವಕ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಭಕ್ತಂಪಳ್ಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಭಗವಂತ ಸತೀಶಕುಮಾರ ತೇಗಲತಿಪ್ಪಿ (18) ಮೃತ ಯುವಕ. ಭಕ್ತಂಪಳ್ಳಿ ಗರಕಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ನಿರ್ಮಿಸಿದ ಬ್ಯಾರೇಜಿನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬ್ಯಾರೇಜಿನ ನೀರಿನಲ್ಲಿ ಈಜಲು ಹೋಗಿ ಸೇತುವೆ ಮೇಲಿನಿಂದ ಸುರಂಗ ಹೊಡೆದಿದ್ದು ತಲೆ ನೀರೊಳಗಿನ ಮರಳಿಗೆ ಗುದ್ದಿದ್ದರಿಂದ ತಲೆಗೆ ಬಲವಾಗಿ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.