ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘನೆ (ಭಾರತೀಯ ದಂಡಸಂಹಿತೆಯ ಸೆಕ್ಷನ್ 188), ಅನಧಿಕೃತ ವಾಹನ ನಿಲುಗಡೆ (ಸೆಕ್ಷನ್ 283) ಮತ್ತು ಸಾರ್ವಜನಿಕರಿಗೆ ತೊಂದರೆ (ಸೆಕ್ಷನ್ 290) ವಿಷಯಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಿಗದಿಪಡಿಸಿದ ಜಾಗಗಳಲ್ಲಿ ಬಸ್ಗಳನ್ನು ನಿಲುಗಡೆ ಮಾಡಲಾಗಿಲ್ಲ. ಬೃಹತ್ ಮೆರವಣಿಗೆ ನಡೆಸಿ ಕಚೇರಿಗೆ ತೆರಳುವವರಿಗೆ, ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯರಿಗೆ ತೊಂದರೆ ಮಾಡಲಾಗಿದೆ.ಮಹಿಳೆಯರು ಮಕ್ಕಳಿಗೂ ತೊಂದರೆ ಮಾಡಲಾಗಿದೆ ಎಂದು ಎಸಿಪಿ ಅವರು ಸಂಘಟಕರ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.