ಬಿಜೆಪಿಯ ಅರವಿಂದ ಬೆಲ್ಲದ ಮಾತನಾಡಿ, ‘ಇನ್ಫೊಸಿಸ್ ಉದ್ಯಮ ಸ್ಥಾಪಿಸುವುದಾಗಿ ಹುಬ್ಬಳ್ಳಿಯಲ್ಲಿ ಸರ್ಕಾರದಿಂದ ಜಮೀನು ಪಡೆಯಿತು. ಆದರೆ, ಅಲ್ಲಿ ಉದ್ಯಮ ಸ್ಥಾಪಿಸದೇ ಮರಗಳನ್ನು ಬೆಳೆಸಿದೆ. ಭೂಮಿ ಬಿಟ್ಟುಕೊಟ್ಟವರು ತಮಗೆ ಉದ್ಯೋಗ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರು ನಮ್ಮ ಬಳಿ ನಿರೀಕ್ಷೆಯಿಂದ ಬಂದು ವಿಚಾರಿಸುತ್ತಾರೆ’ ಎಂದು ಹೇಳಿದರು.