ಆನಂದ್ ಅವರು ಕಂಟ್ರೋಲರೇಟ್ ಆಫ್ ಕ್ವಾಲಿಟಿ ಅಶ್ಯೂರೆನ್ಸ್ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ರಂಗಭೂಮಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಅವರು, ಕನ್ನಡ ಸಾಹಿತ್ಯ ಕಲಾ ಸಂಘ, ರಂಗಸಂಪದ, ಸಮುದಾಯ, ಸ್ಪಂದನ ಸೇರಿದಂತೆ ವಿವಿಧ ರಂಗ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದರು. ‘ಯಯಾತಿ’, ‘ತಾಯಿ’, ‘ಹುತ್ತವ ಬಡಿದರೆ’, ‘ಸಂಕ್ರಾಂತಿ’, ‘ಜೋಕುಮಾರಸ್ವಾಮಿ’, ‘ಗೆಲಿಲಿಯೋ’, ‘ಕತ್ತಲೆ ದಾರಿ ದೂರ’, ‘ದಂಗೆಯ ಮುಂಚಿನ ದಿನಗಳು’, ‘ವಾಸಂತಿ’, ‘ಕೇಸರಿ ಬಿಳಿ ಹಸಿರು’ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಅನುವಾದಕರಾಗಿ ಕೂಡ ಹೆಸರು ಮಾಡಿದ್ದ ಇವರು, ಹಲವು ನಾಟಕಗಳನ್ನು ಕನ್ನಡಕ್ಕೆ ತಂದಿದ್ದರು.