‘ಪೂರ್ವಸಿದ್ಧತಾ ಪರೀಕ್ಷೆಯಂತೆಯೇ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಬಹಿರಂಗಗೊಂಡರೆ, ಕಷ್ಟಪಟ್ಟು ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಪಾಡೇನು?’ ಎಂದು ವಿದ್ಯಾರ್ಥಿನಿ ಗಗನಾ ಆತಂಕ ತೋಡಿ ಕೊಂಡಾಗ, ಸಚಿವರು ಮೇಲಿನಂತೆ
ಪ್ರತಿಕ್ರಿಯಿಸಿದರು. ‘ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಮುಖ್ಯ ಶಿಕ್ಷಕರಿಗೆ 3 ದಿನ ಮೊದಲೇ ನೀಡಲಾಗಿತ್ತು. ಕೆಲವರು ಅದನ್ನು ‘ವಾಟ್ಸ್ಆ್ಯಪ್’ನಲ್ಲಿ, ‘ಹೆಲೊ ಆ್ಯಪ್’ನಲ್ಲಿ ಹಾಕಿದರು. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ನಮಗೆ ಬಿಟ್ಟ ವಿಚಾರ. ವಿದ್ಯಾರ್ಥಿಗಳು ಓದಿನಲ್ಲಿ ಮಗ್ನರಾಗಬೇಕು’ ಎಂದರು.