ಇನ್ಸ್ಪೆಕ್ಟರ್ ರಾಜು ಅವರು ಬೋಗಾದಿ ಚೆಕ್ಪೋಸ್ಟ್ ಬಳಿ ಭಾನುವಾರ ರಾತ್ರಿ 12.30ರ ಸಮಯದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವುದನ್ನು ಗಮನಿಸಿದ ಆರೋಪಿಗಳು, ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದರು. ಅನುಮಾನಗೊಂಡು ಕಾರನ್ನು ಬೆನ್ನಟ್ಟಿ ಬ್ಯಾಂಕರ್ಸ್ ಕಾಲೊನಿಯ ಸಾಯಿ ಸರಸ್ವತಿ ಶಾಲೆ ಬಳಿ ಪೊಲೀಸರು ವಾಹನ ತಡೆದರು.ವಾಹನದಿಂದ ಕೆಳಗೆ ಇಳಿದು ಕಾರಿನತ್ತ ಬರುತ್ತಿದ್ದ ರಾಜು ಮೇಲೆ ಕಾರು ಹರಿಸಿ ಕೊಲ್ಲಲು ಯತ್ನಿಸಿದ್ದಾರೆ. ಈ ವೇಳೆಗೆ ಸ್ಥಳಕ್ಕೆ ಬಂದ ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ಧನರಾಜ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.