ವೀರಣ್ಣಪಾಳ್ಯ, ನಾಗವಾರ ಮುಖ್ಯರಸ್ತೆ, ಎಚ್.ಬಿ.ಆರ್. ಲೇಔಟ್, ಕೆ.ಜಿ. ಹಳ್ಳಿ ಹಾಗೂ ಪಿಳ್ಳಣ್ಣ ಗಾರ್ಡನ್ ಸೇರಿದಂತೆ ವಿವಿಧೆಡೆ ಮನ್ಸೂರ್ ಅಲಿ ಖಾನ್ ಮತ ಯಾಚಿಸಿದರು. ‘ಯುವಶಕ್ತಿಗೆ ಉದ್ಯೋಗ, ಎಲ್ಲ ವರ್ಗದ ಜನರ ಪ್ರಗತಿ, ನಮ್ಮ ಬೆಂಗಳೂರು ಕೇಂದ್ರದ ಸಮಗ್ರ ದೂರದೃಷ್ಟಿಯ ಅಭಿವೃದ್ಧಿಯ ಕನಸು ನನ್ನದು. ನನಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿ’ ಎಂದು ಅವರು ಮನವಿ ಮಾಡಿದರು.