ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಸಾಲಿನಲ್ಲಿ ಶೆಡ್ನಲ್ಲಿ ನಿಲ್ಲಿಸಿ, ಯಾರೂ ಹತ್ತಿರ ಬಾರದಂತೆ ಹಗ್ಗದಿಂದ ತಡೆಯಲಾಗಿರುತ್ತದೆ. ಈ ಹಗ್ಗವನ್ನು ದಾಟಿ ಒಳ ಪ್ರವೇಶಿಸಿದ ಪ್ರವಾಸಿಗ ಬಲರಾಮ ಆನೆಗೆ ತಿನ್ನಲು ಕಬ್ಬು ಕೊಡಲು ಮುಂದಾಗಿದ್ದಾನೆ. ಆನೆಗಳ ಹತ್ತಿರ ಹೋಗಕೂಡದು ಎಂದು ಮಾವುತ ತಿಮ್ಮ ತಿಳಿ ಹೇಳಿದ್ದು, ಕಬ್ಬನ್ನು ಕಿತ್ತುಕೊಂಡಿದ್ದಾದೆ. ಇದರಿಂದ ಕೋಪಗೊಂಡ ಪ್ರವಾಸಿಗ ಮಾವುತರಿಗೆ ಕಪಾಳಕ್ಕೆ ಹೊಡೆದಿದ್ದಾನೆ.