ಅದೇ ಕಟ್ಟಡದಲ್ಲಿಯೇ ‘ತುಲಾ ಸಾವಯವ ಕೈಮಗ್ಗ’ ಮಳಿಗೆಯೂ ಆರಂಭವಾಗಲಿದ್ದು, ಮೇಲುಕೋಟೆಯ ‘ಜನಪದ ಸೇವಾ ಟ್ರಸ್ಟ್’ನ ಕೈಮಗ್ಗದ ಖಾದಿ ಬಟ್ಟೆಗಳು ದೊರೆಯಲಿವೆ. ಮಳೆಯಾಶ್ರಿತ ಪ್ರದೇಶದ ಹತ್ತಿ ಬೆಳೆವ ಕೃಷಿಕರಿಗೂ ಪ್ರೋತ್ಸಾಹ ಸಿಗಲಿದೆ. ಫೆ.17ರಿಂದ 19ರ ವರೆಗೆ ಕೃಷಿ ಹಾಗೂ ಕೈ ಮಗ್ಗದ ಕುರಿತು ಉಪನ್ಯಾಸ, ಸಂವಾದವೂ ನಡೆಯಲಿದೆ.