ಹುಬ್ಬಳ್ಳಿ:‘ಮಾಡದ ಕೆಲಸಕ್ಕೂ ಪ್ರಚಾರ ಪಡೆದುಕೊಳ್ಳುತ್ತಿರುವ, ಜನರ ತೆರಿಗೆ ಹಣ ದುರಪಯೋಗ ಬಳಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೇವಲ ಪಬ್ಲಿಸಿಟಿ ಮಿನಿಸ್ಟರ್’ ಎಂದು ಎಐಸಿಸಿ ಮಾಧ್ಯಮ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ರಫೇಲ್ ವಿಮಾನ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಭ್ರಷ್ಟಾಚಾರವಾಗಿದೆ, ದೇಶದ ರಕ್ಷಣೆಗೆ ಮೋದಿ ಸರ್ಕಾರ ಧಕ್ಕೆ ತರುತ್ತಿದೆ’ ಎಂದರು.