ರಾಜ್ಯದಲ್ಲಿ 2017–18ರಲ್ಲಿ 31,208 ಜನರ ಶ್ರವಣ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ 30 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದು, ದೋಷ ಕಂಡುಬಂದ 0–14 ವಯೋಮಾನದ ಮಕ್ಕಳಿಗೆ ಸರ್ವಶಿಕ್ಷಣ ಅಭಿಯಾನ ಮತ್ತು ಅಂಗಲವಿಕಲರ ಅಭಿವೃದ್ಧಿ ಇಲಾಖೆ ಮೂಲಕ ಶ್ರವಣ ಯಂತ್ರಗಳನ್ನು ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ಅಗತ್ಯ ಇರುವವರಿಗೆ ಅದನ್ನೂ ನಡೆಸಲಾಗುತ್ತಿದೆ ಎಂದರು.