<p><strong>ಬೆಂಗಳೂರು:</strong> ಈಗಿನ ವ್ಯವಸ್ಥೆಯಿಂದ ಬೇಸತ್ತು ವಿಭಿನ್ನ ಆಲೋಚನೆ ಹಾಗೂ ಆಡಳಿತದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಮಾಜಿ ಸೈನಿಕರು ‘ಸಾರ್ವಜನಿಕ ಆದರ್ಶ ಸೇನಾ’ ಎಂಬ ರಾಜಕೀಯ ಪಕ್ಷವೊಂದನ್ನು ರಾಜ್ಯದಲ್ಲಿ ಕಟ್ಟಿದ್ದಾರೆ.</p>.<p>ದಕ್ಷಿಣ ಭಾರತದಲ್ಲಿ ಮಾಜಿ ಸೈನಿಕರು, ನಿವೃತ್ತ ಸೇನಾಧಿಕಾರಿಗಳೇ ಸೇರಿಕೊಂಡು ಪ್ರಥಮ ಬಾರಿಗೆ ಈ ಪಕ್ಷ ಸ್ಥಾಪಿಸಿದ್ದಾರೆ.</p>.<p>ಕೇಂದ್ರ ಚುನಾವಣಾ ಆಯೋಗವು ಸೇನಾಗೆ ಅನುಮೋದನೆ ನೀಡಿದೆ. ಪಕ್ಷದ ಪ್ರಥಮ ಅಧ್ಯಕ್ಷರಾಗಿ ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಬ್ರಿಗೇಡಿಯರ್ ಆಗಿ ನಿವೃತ್ತರಾದ ಬಳಿಕ ಇಲ್ಲಿನ ವಿದ್ಯಾರಣ್ಯಪುರದಲ್ಲಿ ನೆಲೆಸಿರುವ ರವಿ ಮುನಿಸ್ವಾಮಿ ಆಯ್ಕೆಗೊಂಡಿದ್ದಾರೆ.</p>.<p>ಜಂಟಿ ಕಾರ್ಯದರ್ಶಿಗಳಾಗಿ ನಿವೃತ್ತ ಮೇಜರ್ ಎನ್.ರಘುರಾಮ್ ರೆಡ್ಡಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯ ನಿವೃತ್ತ ಸುಬೇದಾರ್ ರಮೇಶ್ ಜಗತ್ತಪ್ಪ ಆಯ್ಕೆಗೊಂಡಿದ್ದಾರೆ.</p>.<p>‘ಶ್ರೀಲಂಕಾ ಆಪರೇಷನ್’ ವೇಳೆ ರವಿ ಶಾಸ್ತ್ರಸ್ತ್ರಗಳ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು. ರಘುರಾಮ್ರೆಡ್ಡಿ ಸಹ ಗಡಿಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಿದ್ದವರು.</p>.<p>‘ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವ ಬಯಕೆಯಿದೆ’ ಎಂದು ಅಧ್ಯಕ್ಷ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಕಹಳೆ ಚಿಹ್ನೆ ನಿಗದಿ ಪಡಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ.</p>.<p>‘ಜನರಿಂದ ಜನರಿಗಾಗಿ ಜನರಿ ಗೋಸ್ಕರ ಸರ್ಕಾರಗಳು ಆಡಳಿತ ನಡೆಸುತ್ತಿಲ್ಲ. ಭ್ರಷ್ಟಾಚಾರ ತಾಂಡವ<br />ವಾಡುತ್ತಿದೆ. ಧರ್ಮದ ಹೆಸರಿನಲ್ಲಿ ವ್ಯರ್ಥ ಹೋರಾಟಗಳು ನಡೆಯುತ್ತಿವೆ. ಧರ್ಮದ ಹೋರಾಟ ಜನರಿಗೆ ಶಿಕ್ಷಣ, ಅನ್ನ ನೀಡುತ್ತಿಲ್ಲ. ಪರಿಣಾಮಕಾರಿ, ಪಾರದರ್ಶಕ, ಬದ್ಧತೆಯುಳ್ಳ ಆಡಳಿತ ರಾಜ್ಯಕ್ಕೆ ಬೇಕಿದೆ. ಅದನ್ನು ಈಡೇರಿಸುವ ಆಲೋಚನೆ ಹೊಸ ಪಕ್ಷದ್ದು’ ಎಂದು ಪಕ್ಷದ ನೇತೃತ್ವ ವಹಿಸಿರುವ ನಿವೃತ್ತ ಸೇನಾಧಿಕಾರಿಗಳು ಹೇಳುತ್ತಾರೆ.</p>.<p><strong>ಜನರಿಂದಲೇ ದೇಣಿಗೆ:</strong> ಜಿಲ್ಲಾಮಟ್ಟ ದಲ್ಲೂ ಪದಾಧಿಕಾರಿಗಳನ್ನು ನೇಮಿಸ ಲಾಗುವುದು. ಮಾಜಿ ಸೈನಿಕರ ಸಂಘಗಳ ಬೆಂಬಲ ಪಕ್ಷಕ್ಕಿದೆ. ರಾಜ್ಯದಲ್ಲಿನ ಸಾಫ್ಟ್ವೇರ್ ಎಂಜಿನಿಯರ್, ವೈದ್ಯರು ಹಾಗೂ ಸುಶಿಕ್ಷಿತರು ನೆರವು ಸಿಕ್ಕಿದೆ. ಡಿಸೆಂಬರ್ನಲ್ಲಿ ಪಕ್ಷದ ಉದ್ಘಾಟನೆ, ವೆಬ್ಸೈಟ್: http://sasparty.in ಅನಾವರಣ ನಡೆಯಲಿದೆ. ಜನವರಿ ಯಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗು ವುದು ಎಂದು ಅಧ್ಯಕ್ಷರು ತಿಳಿಸಿದರು.</p>.<p><strong>ವೆಬ್ಸೈಟ್ನಲ್ಲಿ ಖರ್ಚು, ವೆಚ್ಚ ಪ್ರಕಟ</strong><br />ಸಭೆ, ಪ್ರಚಾರ, ಚುನಾವಣೆಯ ಖರ್ಚಿಗೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ. ಪ್ರತಿ ರೂಪಾಯಿಯ ಖರ್ಚು ವೆಚ್ಚಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ನಿವೃತ್ತ ಸೈನಿಕರಿರುವ ಕಾರಣಕ್ಕೆ ಪಕ್ಷದಲ್ಲಿ ಶಿಸ್ತು ಇರಲಿದೆ ಎಂದು ರವಿ ಮುನಿಸ್ವಾಮಿ ಹೇಳಿದರು.</p>.<p>**</p>.<p>ಜನರು ಬದಲಾವಣೆ ಬಯಸಿದ್ದಾರೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಮೇಲೆ ಬೇಸತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.<br /><em><strong>–ರವಿ ಮುನಿಸ್ವಾಮಿ, ಅಧ್ಯಕ್ಷ, ‘ಸಾರ್ವಜನಿಕ ಆದರ್ಶ ಸೇನಾ’</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಈಗಿನ ವ್ಯವಸ್ಥೆಯಿಂದ ಬೇಸತ್ತು ವಿಭಿನ್ನ ಆಲೋಚನೆ ಹಾಗೂ ಆಡಳಿತದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಮಾಜಿ ಸೈನಿಕರು ‘ಸಾರ್ವಜನಿಕ ಆದರ್ಶ ಸೇನಾ’ ಎಂಬ ರಾಜಕೀಯ ಪಕ್ಷವೊಂದನ್ನು ರಾಜ್ಯದಲ್ಲಿ ಕಟ್ಟಿದ್ದಾರೆ.</p>.<p>ದಕ್ಷಿಣ ಭಾರತದಲ್ಲಿ ಮಾಜಿ ಸೈನಿಕರು, ನಿವೃತ್ತ ಸೇನಾಧಿಕಾರಿಗಳೇ ಸೇರಿಕೊಂಡು ಪ್ರಥಮ ಬಾರಿಗೆ ಈ ಪಕ್ಷ ಸ್ಥಾಪಿಸಿದ್ದಾರೆ.</p>.<p>ಕೇಂದ್ರ ಚುನಾವಣಾ ಆಯೋಗವು ಸೇನಾಗೆ ಅನುಮೋದನೆ ನೀಡಿದೆ. ಪಕ್ಷದ ಪ್ರಥಮ ಅಧ್ಯಕ್ಷರಾಗಿ ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಬ್ರಿಗೇಡಿಯರ್ ಆಗಿ ನಿವೃತ್ತರಾದ ಬಳಿಕ ಇಲ್ಲಿನ ವಿದ್ಯಾರಣ್ಯಪುರದಲ್ಲಿ ನೆಲೆಸಿರುವ ರವಿ ಮುನಿಸ್ವಾಮಿ ಆಯ್ಕೆಗೊಂಡಿದ್ದಾರೆ.</p>.<p>ಜಂಟಿ ಕಾರ್ಯದರ್ಶಿಗಳಾಗಿ ನಿವೃತ್ತ ಮೇಜರ್ ಎನ್.ರಘುರಾಮ್ ರೆಡ್ಡಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯ ನಿವೃತ್ತ ಸುಬೇದಾರ್ ರಮೇಶ್ ಜಗತ್ತಪ್ಪ ಆಯ್ಕೆಗೊಂಡಿದ್ದಾರೆ.</p>.<p>‘ಶ್ರೀಲಂಕಾ ಆಪರೇಷನ್’ ವೇಳೆ ರವಿ ಶಾಸ್ತ್ರಸ್ತ್ರಗಳ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು. ರಘುರಾಮ್ರೆಡ್ಡಿ ಸಹ ಗಡಿಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಿದ್ದವರು.</p>.<p>‘ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವ ಬಯಕೆಯಿದೆ’ ಎಂದು ಅಧ್ಯಕ್ಷ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಕಹಳೆ ಚಿಹ್ನೆ ನಿಗದಿ ಪಡಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ.</p>.<p>‘ಜನರಿಂದ ಜನರಿಗಾಗಿ ಜನರಿ ಗೋಸ್ಕರ ಸರ್ಕಾರಗಳು ಆಡಳಿತ ನಡೆಸುತ್ತಿಲ್ಲ. ಭ್ರಷ್ಟಾಚಾರ ತಾಂಡವ<br />ವಾಡುತ್ತಿದೆ. ಧರ್ಮದ ಹೆಸರಿನಲ್ಲಿ ವ್ಯರ್ಥ ಹೋರಾಟಗಳು ನಡೆಯುತ್ತಿವೆ. ಧರ್ಮದ ಹೋರಾಟ ಜನರಿಗೆ ಶಿಕ್ಷಣ, ಅನ್ನ ನೀಡುತ್ತಿಲ್ಲ. ಪರಿಣಾಮಕಾರಿ, ಪಾರದರ್ಶಕ, ಬದ್ಧತೆಯುಳ್ಳ ಆಡಳಿತ ರಾಜ್ಯಕ್ಕೆ ಬೇಕಿದೆ. ಅದನ್ನು ಈಡೇರಿಸುವ ಆಲೋಚನೆ ಹೊಸ ಪಕ್ಷದ್ದು’ ಎಂದು ಪಕ್ಷದ ನೇತೃತ್ವ ವಹಿಸಿರುವ ನಿವೃತ್ತ ಸೇನಾಧಿಕಾರಿಗಳು ಹೇಳುತ್ತಾರೆ.</p>.<p><strong>ಜನರಿಂದಲೇ ದೇಣಿಗೆ:</strong> ಜಿಲ್ಲಾಮಟ್ಟ ದಲ್ಲೂ ಪದಾಧಿಕಾರಿಗಳನ್ನು ನೇಮಿಸ ಲಾಗುವುದು. ಮಾಜಿ ಸೈನಿಕರ ಸಂಘಗಳ ಬೆಂಬಲ ಪಕ್ಷಕ್ಕಿದೆ. ರಾಜ್ಯದಲ್ಲಿನ ಸಾಫ್ಟ್ವೇರ್ ಎಂಜಿನಿಯರ್, ವೈದ್ಯರು ಹಾಗೂ ಸುಶಿಕ್ಷಿತರು ನೆರವು ಸಿಕ್ಕಿದೆ. ಡಿಸೆಂಬರ್ನಲ್ಲಿ ಪಕ್ಷದ ಉದ್ಘಾಟನೆ, ವೆಬ್ಸೈಟ್: http://sasparty.in ಅನಾವರಣ ನಡೆಯಲಿದೆ. ಜನವರಿ ಯಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗು ವುದು ಎಂದು ಅಧ್ಯಕ್ಷರು ತಿಳಿಸಿದರು.</p>.<p><strong>ವೆಬ್ಸೈಟ್ನಲ್ಲಿ ಖರ್ಚು, ವೆಚ್ಚ ಪ್ರಕಟ</strong><br />ಸಭೆ, ಪ್ರಚಾರ, ಚುನಾವಣೆಯ ಖರ್ಚಿಗೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ. ಪ್ರತಿ ರೂಪಾಯಿಯ ಖರ್ಚು ವೆಚ್ಚಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ನಿವೃತ್ತ ಸೈನಿಕರಿರುವ ಕಾರಣಕ್ಕೆ ಪಕ್ಷದಲ್ಲಿ ಶಿಸ್ತು ಇರಲಿದೆ ಎಂದು ರವಿ ಮುನಿಸ್ವಾಮಿ ಹೇಳಿದರು.</p>.<p>**</p>.<p>ಜನರು ಬದಲಾವಣೆ ಬಯಸಿದ್ದಾರೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಮೇಲೆ ಬೇಸತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.<br /><em><strong>–ರವಿ ಮುನಿಸ್ವಾಮಿ, ಅಧ್ಯಕ್ಷ, ‘ಸಾರ್ವಜನಿಕ ಆದರ್ಶ ಸೇನಾ’</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>