ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿಯ ₹ 426 ಕೋಟಿ ಅರಣ್ಯಕ್ಕೆ: ಹಣಕಾಸು ಇಲಾಖೆ ಸಮ್ಮತಿ

ಡಿ.2ರ ಮಂಡಳಿ ಸಭೆಯಲ್ಲಿ ಆದೇಶಕ್ಕೆ ಅನುಮೋದನೆ ಸಾಧ್ಯತೆ
Published : 2 ಡಿಸೆಂಬರ್ 2024, 5:22 IST
Last Updated : 2 ಡಿಸೆಂಬರ್ 2024, 5:22 IST
ಫಾಲೋ ಮಾಡಿ
Comments
ಸಭೆ ತೀರ್ಮಾನವೇ ಅಂತಿಮ
‘ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅರಣ್ಯ ಇಲಾಖೆಗೆ ಹಣ ನೀಡುವ ಸಂಬಂಧ ಮಂಡಳಿ ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಸರ್ಕಾರದ ಆದೇಶಗಳಾಗಿದ್ದರೂ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನವೇ ಅಂತಿಮ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೆ–ಶೋರ್‌ಗೆ ₹126 ಕೋಟಿ
‘ಕರಾವಳಿ ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿರ್ವಹಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ₹126 ಕೋಟಿಯನ್ನು ಬಡ್ಡಿರಹಿತ ಸಾಲವನ್ನಾಗಿ ಅರಣ್ಯ ಇಲಾಖೆ ಪಡೆದುಕೊಂಡು ಕೆ–ಶೋರ್ ಯೋಜನೆಗೆ ಬಳಸಿಕೊಳ್ಳಬಹುದು. ಇದಕ್ಕೆ ರಾಜ್ಯ ಹಣಕಾಸು ಇಲಾಖೆಯ ಸಮ್ಮತಿಯನ್ನು ಪಡೆಯಲಾಗಿದೆ’ ಎಂದು ಅರಣ್ಯ ಇಲಾಖೆಯ ಕಾರ್ಯದರ್ಶಿ ನವೆಂಬರ್‌ 26ರಂದು ಆದೇಶ (ಸರ್ಕಾರಿ ಆದೇಶ: ಎಫ್‌ಇಇ 41) ಹೊರಡಿಸಿದ್ದಾರೆ. ಕೆ–ಶೋರ್‌ಗೆ ಹಣ ನೀಡುವ ವಿಷಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಅರಣ್ಯ ಪಡೆಯ ಮುಖ್ಯಸ್ಥರು, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪ್ರಸ್ತಾವದಂತೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಸಚಿವರ ಕಚೇರಿಗೆ ಕಂಪ್ಯೂಟರ್‌, ಟಿವಿ, ಫ್ರಿಜ್‌
ಅರಣ್ಯ ಸಚಿವರ ಆಪ್ತ ಶಾಖೆಯ ಕಚೇರಿಯ ನಿತ್ಯ ಬಳಕೆಗೆ ಕಂಪ್ಯೂಟರ್‌, ಟ್ಯಾಬ್‌, ಪ್ರಿಂಟರ್‌, ಟಿವಿ, ಯುಪಿಎಸ್‌, ಫ್ರಿಜ್‌ ಸೇರಿದಂತೆ 19 ವಿಧದ ಎಲೆಕ್ಟ್ರಾನಿಕ್‌ ಉಪಕರಣ– ಸಾಧನಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಹಣದಿಂದ ಪೂರೈಸಲಾಗಿದೆ. ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವರ ಟಿಪ್ಪಣಿ ಮೇರೆಗೆ ಮಂಡಳಿ ಸದಸ್ಯ ಕಾರ್ಯದರ್ಶಿ ಅವರು ಸುಮಾರು ₹72 ಲಕ್ಷ ಮೌಲ್ಯದ ಉಪಕರಣಗಳನ್ನು ಪೂರೈಸಲು ಅನುಮೋದನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT