ಬೆಂಗಳೂರು: ‘ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ‘ಶಕ್ತಿ ಯೋಜನೆ’ಯು ಇಂದಿಗೆ ಒಂದು ವರ್ಷ ಪೂರೈಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ಹಂಚಿಕೊಂಡಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಕಳೆದೊಂದು ವರ್ಷದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಏರಿಕೆಯಾಗಿದೆ. ದೂರ ಪ್ರಯಾಣ ಮಾಡಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಹಲವು ಸಮೀಕ್ಷೆಗಳು ವರದಿ ಮಾಡಿವೆ’. ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸಿರುವುದು ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ ಎಂದು ಪೋಸ್ಟ್ನಲ್ಲಿ ಬರೆದು ಕೊಂಡಿದ್ದಾರೆ.
ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ 226 ಕೋಟಿ ಉಚಿತ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸುವ ಮೂಲಕ ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ ₹5,500 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ‘ಶಕ್ತಿ’ ಯೋಜನೆ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಚಾಲನೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಖುಷಿಯಿಂದ ಬಸ್ಗೆ ನಮಸ್ಕರಿಸಿದರು.
ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ ಯೋಜನೆಗೆ ವರ್ಷದ ಸಂಭ್ರಮ. ಕಳೆದೊಂದು ವರ್ಷದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಏರಿಕೆಯಾಗಿದೆ, ದೂರಪ್ರಯಾಣ ಮಾಡಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಹಲವು ಸಮೀಕ್ಷೆಗಳು ವರದಿ ಮಾಡಿವೆ. ಒಟ್ಟಿನಲ್ಲಿ ಶಕ್ತಿ… pic.twitter.com/PFCMWcUkbf
— Siddaramaiah (@siddaramaiah) June 11, 2024
ತನ್ನ ಶಿಕ್ಷಣದ ಕನಸಿಗೆ ಬೆಂಬಲವಾಗಿ ನಿಂತಿರುವ ಶಕ್ತಿ ಯೋಜನೆಯ ಬಗ್ಗೆ ಕಲಬುರಗಿಯ ಬಾಲಕಿಯೊಬ್ಬಳು ಅಭಿಪ್ರಾಯ ಹಂಚಿಕೊಂಡಿದ್ದಾಳೆ.
— Siddaramaiah (@siddaramaiah) June 11, 2024
ಇದು ಈ ವಿದ್ಯಾರ್ಥಿನಿಯ ಮಾತು ಮಾತ್ರವಲ್ಲ ನಾಡಿನ ಸಮಸ್ತ ಹೆಣ್ಣುಮಕ್ಕಳ ಮನಸಿನ ಮಾತೂ ಆಗಿದೆ. #ಶಕ್ತಿಸಂಚಾರ #ವರ್ಷದಸಂಭ್ರಮ #ShaktiScheme pic.twitter.com/Ex33w35iAL
“ಶಕ್ತಿ”ಗೆ ಒಂದು ವರ್ಷ
— Karnataka Congress (@INCKarnataka) June 11, 2024
ಜನರಲ್ಲಿ ಮೂಡಿದೆ ಹರ್ಷ
ಶಕ್ತಿ ಯೋಜನೆಯಿಂದ ಕೆಎಸ್ಆರ್ಟಿಸಿಗೆ ಆರ್ಥಿಕ ಚೈತನ್ಯ
2023ರ ಜೂನ್ನಿಂದ 2024ರ ಮೇ ವರೆಗೆ ಒಟ್ಟು ₹ 4,809 ಕೋಟಿ ದಾಖಲೆಯ ಆದಾಯ. pic.twitter.com/PBvsA9EWju
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.