ಸಂಘದ ಆಕ್ಷೇಪ: ‘2006ರಿಂದ ಕೆಲಸಕ್ಕೆ ಸೇರಿದ ಹಾಗೂ ಅವರ ಪೈಕಿ ನಿಧನರಾದ ನೌಕರರ ಅವಲಂಬಿತರಿಗೆ ಕುಟುಂಬ ಪಿಂಚಣಿ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದೆವು. ಆದರೆ, ಅದನ್ನು 2018ರ ಏಪ್ರಿಲ್ನಿಂದ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ. 12 ವರ್ಷಗಳ ಅವಧಿಯಲ್ಲಿ 1,000 ಕ್ಕೂ ಹೆಚ್ಚು ನೌಕರರು ಮೃತಪಟ್ಟಿದ್ದಾರೆ. ಅವರ ಅವಲಂಬಿತರಿಗೆ ಪೂರ್ವಾನ್ವಯಗೊಳಿಸಿ ಕುಟುಂಬ ಪಿಂಚಣಿ ನೀಡಬೇಕು’ ಎಂದು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಆಗ್ರಹಿಸಿದ್ದಾರೆ.