ಅವರು ತಾಲ್ಲೂಕಿನ ಮಳಗಿಯಲ್ಲಿ ಭಾನುವಾರ ನಡೆದ ಮೇದಾರ ಜನಾಂಗದ ಸಮಾವೇಶದಲ್ಲಿ ಮಾತನಾಡಿದರು. ‘ಕಾರ್ಮಿಕ ನಿಧಿ ಮೇಲೆ ಕಳ್ಳಗಣ್ಣು’ ಎಂಬ ದೊಡ್ಡ ಲೇಖನವನ್ನು ‘ಪ್ರಜಾವಾಣಿ’ ಪ್ರಕಟಿಸಿದ್ದು ಗಮನಿಸಿದ್ದೇನೆ. ರಾಜ್ಯವೇ ಗಮನಿಸಬಹುದಾದ ವರದಿ ಇದಾಗಿದೆ. ಕಾರ್ಮಿಕ ಇಲಾಖೆಯಲ್ಲಿ ₹ 8–10ಸಾವಿರ ಕೋಟಿ ಹಣವಿದೆ. ಇದರ ಸದ್ಬಳಕೆ ಆಗಬೇಕು, ಇಲಾಖೆಯ ಕಾರ್ಯಕ್ರಮಗಳು ಉಪಯೋಗವಾಗಬೇಕು ಎಂದು ವರದಿಯಲ್ಲಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.