‘ಇಂಗ್ಲಿಷ್ ಶಿಕ್ಷಣ ಬೆನ್ನತ್ತಿ ಹೋಗುವವರಿಗೆ ನನ್ನ ಮಾತು ಇಷ್ಟೇ, ಇಂಗ್ಲಿಷ್ ಇರುವುದೇ ತಪ್ಪು ತಪ್ಪಾಗಿ ಮಾತನಾಡಲು. ಸರಿಯಾಗಿ ಮಾತನಾಡಲು ಕನ್ನಡವಿದೆ. ಕನ್ನಡವನ್ನು ಸರಿಯಾಗಿ ಬಳಸೋಣ. ನನ್ನಂತಹ ಬಡ ಕುಟುಂಬದ ಹುಡುಗ ವಿಧಾನಸೌಧ ತಲುಪಲು ಕಾರಣರಾದ ಡಾ।ಬಿ.ಆರ್. ಅಂಬೇಡ್ಕರ್, ನನ್ನಂತಹ ಅನಾಥರಿಗೆ ಅನ್ನ ನೀಡಿ ಬೆಳೆಸಿದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸುತ್ತೇನೆ’ ಎಂದು ಹೇಳಿದರು.