ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಬಹುಮಾನದ (₹50 ಸಾವಿರ) ಈ ಕವನ ಸ್ಪರ್ಧೆಗೆ 1,500ಕ್ಕೂ ಅಧಿಕ ಕವನಗಳು ಬಂದಿದ್ದವು. ಈ ಪೈಕಿ, ಫಾಲ್ಗುಣ ಗೌಡ ಅಚವೆ (ಅಂಕೋಲ) ಅವರ ‘ದಣಪೆ’, ಸಂಧ್ಯಾ ಹೆಗಡೆ (ಬೆಂಗಳೂರು) ಅವರ ‘ರಂಗಸ್ಥಳ’, ಶಾಂತಾಕುಮಾರಿ (ಬೆಂಗಳೂರು) ಅವರ ‘ಬಾರು ಡಾನ್ಸರು’, ಸುಧಾ ಅಡುಕಳ (ಉಡುಪಿ) ಅವರ ‘ಹಕ್ಕಿ ಮತ್ತು ಹುಡುಗಿ’, ರಂಜನೀ ಕೀರ್ತಿ (ಬೆಂಗಳೂರು) ಅವರ ‘ತಥಾಸ್ತು’ ಮತ್ತು ದೀಪಾ ಹಿರೇಗುತ್ತಿ (ಚಿಕ್ಕಮಗಳೂರು) ಅವರ ‘ಆಕ್ರಮಣ’ ಕವನಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.