ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News: ಈ ದಿನದ ಪ್ರಮುಖ ಸುದ್ದಿಗಳು– ಆಗಸ್ಟ್ 2 ಬುಧವಾರ 2023

ರಾಜ್ಯ, ದೇಶ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Published 2 ಆಗಸ್ಟ್ 2023, 12:44 IST
Last Updated 2 ಆಗಸ್ಟ್ 2023, 12:44 IST
ಅಕ್ಷರ ಗಾತ್ರ
Introduction

ರಾಜ್ಯ, ದೇಶ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

1

ಕುನೋ: ಚೀತಾ ‘ಧಾತ್ರಿ‘ ಸಾವು; 5 ತಿಂಗಳಲ್ಲಿ ಮೃತ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆ

ಚೀತಾ (ಸಾಂದರ್ಭಿಕ ಚಿತ್ರ)
ಚೀತಾ (ಸಾಂದರ್ಭಿಕ ಚಿತ್ರ)

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ‘ಧಾತ್ರಿ‘ ಬುಧವಾರ ಬೆಳಗ್ಗೆ ಮೃತಪಟ್ಟಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 9ಕ್ಕೇರಿದೆ.

ಪೂರ್ಣ ಸುದ್ದಿ ಓದಲು

ಕುನೋ: ಚೀತಾ ‘ಧಾತ್ರಿ‘ ಸಾವು; 5 ತಿಂಗಳಲ್ಲಿ ಮೃತ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆ

2

ಪ್ರಧಾನಿ ಮೋದಿಯವರು ರಾಜೀವ್ ಗಾಂಧಿಯಂತೆ ‘ಮಿಸ್ಟರ್ ಕ್ಲೀನ್’: ಅಜಿತ್‌ ಪವಾರ್‌

Top 10 News: ಈ ದಿನದ ಪ್ರಮುಖ ಸುದ್ದಿಗಳು– ಆಗಸ್ಟ್ 2 ಬುಧವಾರ 2023

ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಹಾಗೆ ‘ಮಿಸ್ಟರ್‌ ಕ್ಲೀನ್‘ ಎಂದು ಮಹಾರಾಷ್ಟ್ರದ ಉಪ‍ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೊಗಳಿದ್ದಾರೆ. ‘ರಾಜೀವ್‌ ಗಾಂಧಿ ಅವರು ಮಿಸ್ಟರ್‌ ಕ್ಲೀನ್‌ ಎನ್ನುವ ಇಮೇಜ್ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅದೇ ಖ್ಯಾತಿ ಇದೆ‘ ಎಂದು ಅವರು ಹೇಳಿದ್ದಾರೆ.

3

ಮೋದಿಯವರೇ ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ನಿಲುವೇನು?: ಸಿದ್ದರಾಮಯ್ಯ

ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ (ಉಚಿತ) ಯೋಜನೆಗಳನ್ನು ಟೀಕಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ‍್ರತಿಕ್ರಿಯಿಸಿದ್ದಾರೆ. ಈ ಸಂಬಂಧ #AnswerMadiModi (ಆನ್ಸರ್‌ಮಾಡಿಮೋದಿ) ಟ್ಯಾಗ್‌ ಬಳಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.

4

ದೆಹಲಿಗೆ ಗಲಭೆ ವ್ಯಾಪಿಸದಂತೆ ಕಟ್ಟೆಚ್ಚರ; ಪೆಟ್ರೋಲ್ ಚಿಲ್ಲರೆ ಮಾರಾಟಕ್ಕೆ ನಿಷೇಧ

Top 10 News: ಈ ದಿನದ ಪ್ರಮುಖ ಸುದ್ದಿಗಳು– ಆಗಸ್ಟ್ 2 ಬುಧವಾರ 2023

ಹರಿಯಾಣದಲ್ಲಿ ಭುಗಿಲೆದ್ದಿರುವ ಕೋಮುಗಲಭೆ ದೆಹಲಿಗೂ ವ್ಯಾಪಿಸುವ ಭೀತಿ ಎದುರಾಗಿದೆ. ಗುರುಗ್ರಾಮದ ಸೆಕ್ಟರ್ 70ರಲ್ಲಿ ಹಲವು ಅಂಗಡಿ ಹಾಗೂ ಗುಡಿಸಿಲುಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಭೆ ನಿಯಂತ್ರಿಸಲು ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.

5

ಅಮೂಲ್‌ ಬಹಿಷ್ಕರಿಸುವ ಅಗತ್ಯವಿಲ್ಲ: ಭೂಪೇಂದ್ರ ಪಟೇಲ್‌

ಭೂಪೇಂದ್ರ ಪಟೇಲ್‌
ಭೂಪೇಂದ್ರ ಪಟೇಲ್‌

‘ಕರ್ನಾಟಕದಲ್ಲಿ ಅಮೂಲ್‌ ಉತ್ಪನ್ನಗಳನ್ನು ಬಹಿಷ್ಕರಿಸುವ ಅಗತ್ಯವಿಲ್ಲ’ ಎಂದು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮಂಗಳವಾರ ಹೇಳಿದ್ದಾರೆ.

6

ಸಿಂಗಪುರ ಸಂಸತ್‌ಗೆ ಭಾರತ ಮೂಲದ ಮೂವರ ನಾಮನಿರ್ದೇಶನ– ಪ್ರಮಾಣವಚನ ಸ್ವೀಕಾರ

ಸಿಂಗಪುರ
ಸಿಂಗಪುರ

ಭಾರತೀಯ ಮೂಲದ ಮೂವರು ಇಲ್ಲಿನ ಸಂಸತ್‌ ಸದಸ್ಯರಾಗಿ ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದರು.  ಸಂಸತ್ತಿಗೆ ಒಂಬತ್ತು ಜನರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು. ಇವರ ಪೈಕಿ ಮೂವರು ಭಾರತೀಯರು ಸೇರಿದ್ದಾರೆ.

7

ದೆಹಲಿ ಸೇವಾ ವಿಷಯ ಮಸೂದೆಗೆ ರಾಜ್ಯಸಭೆಯಲ್ಲಿ ಸೋಲು: ಎಎಪಿ ಸಂಸದ ಸಂಜಯ್‌ ಸಿಂಗ್‌

ಸಂಜಯ್‌ ಸಿಂಗ್
ಸಂಜಯ್‌ ಸಿಂಗ್

ದೆಹಲಿ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಸೋಲಾಗಲಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಸಂಸದ ಸಂಜಯ್ ಸಿಂಗ್‌ ಬುಧವಾರ ಹೇಳಿದರು.

8

ಕೇರಳ: ಮದ್ಯ ಕುಡಿಸಿ ಅಮೆರಿಕ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Top 10 News: ಈ ದಿನದ ಪ್ರಮುಖ ಸುದ್ದಿಗಳು– ಆಗಸ್ಟ್ 2 ಬುಧವಾರ 2023

ಪ್ರವಾಸಕ್ಕೆಂದು ರಾಜ್ಯಕ್ಕೆ ಬಂದು, ಸ್ಥಳೀಯ ಆಶ್ರಮದಲ್ಲಿ ತಂಗಿದ್ದ ಅಮೆರಿಕ ಮೂಲದ ಮಹಿಳೆಯನ್ನು ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಿಂದ ವರದಿಯಾಗಿದೆ.

9

ಎನ್‌ಡಿಎ, ಇಂಡಿಯಾ ಯಾವುದೇ ಒಕ್ಕೂಟದಲ್ಲಿ ನಾವಿಲ್ಲ, ಸೇರುವ ಇಚ್ಛೆ ಇಲ್ಲ: ಕೆಸಿಆರ್

Top 10 News: ಈ ದಿನದ ಪ್ರಮುಖ ಸುದ್ದಿಗಳು– ಆಗಸ್ಟ್ 2 ಬುಧವಾರ 2023

ಎನ್‌ಡಿಎ ಮತ್ತು ಇಂಡಿಯಾ ಯಾವುದೇ ಒಕ್ಕೂಟದಲ್ಲಿ ನಾವಿಲ್ಲ, ಯಾವುದಕ್ಕೂ ಸೇರುವ ಇಚ್ಛೆಯೂ ನಮಗೆ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಪಕ್ಷದ(ಬಿಆರ್‌ಎಸ್) ವರಿಷ್ಠ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸ್ಪಷ್ಟಪಡಿಸಿದ್ದಾರೆ.

ADVERTISEMENT
ADVERTISEMENT