<p><strong>ಬೆಳಗಾವಿ:</strong>‘ವಿಧಾನ ಪರಿಷತ್ತಿನ ಕಲಾಪಗಳನ್ನು ನಡೆಸುವುದಕ್ಕೆ ಕಾಗದರಹಿತ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅದನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತೇನೆ’</p>.<p>ನೂತನ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಕನಸು ಇದು. ಅಧಿಕಾರ ಸ್ವೀಕರಿಸಿದ ಬಳಿಕ ಬುಧವಾರ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.</p>.<p><strong>*ನೀವು ಸಭಾಪತಿ ಆಗುವ ಬಯಕೆ ಹೊಂದಿದ್ದಿರಾ?</strong></p>.<p>ನಾನು ನಾಲ್ಕು ಬಾರಿ ವಿಧಾನಸಭೆ, ಮೂರು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಇದುವರೆಗೆ ಪಕ್ಷವು ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಈಗ ಜವಾಬ್ದಾರಿ ಕೊಟ್ಟಿದೆ. ಅದನ್ನು ಬಯಸದೇ ಬಂದ ಭಾಗ್ಯ ಎನ್ನಲಾಗದು. ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.</p>.<p><strong>* ರಾಜಕೀಯದಿಂದಲೇ ದೂರವಾಗುವ ಮಾತನಾಡಿದವರು ನೀವು. ಮತ್ತೆ ಈ ಹುದ್ದೆವರೆಗೆ ಹೇಗೆ ಬಂದಿರಿ?</strong></p>.<p>ವಿಧಾನಸಭೆ ಚುನಾವಣೆಯಲ್ಲಿ ಐದನೇ ಬಾರಿ ಸ್ಪರ್ಧಿಸಿದಾಗ ಸೋತೆ. ಆರ್ಥಿಕ ಬಲ ಇಲ್ಲದ ಕಾರಣಕ್ಕೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದೆ. ಪಕ್ಷವು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತು. ಈ ಚುನಾವಣೆ<br />ಗಳಲ್ಲಿ ಎರಡು ಬಾರಿ ಗೆದ್ದ ಬಳಿಕ ಇನ್ನು ಸಾಕೆನಿಸಿತು. ನಾನು ಸ್ಪರ್ಧಿಸದಿರಲು ನಿರ್ಧರಿಸಿದ್ದೆ. 25 ವರ್ಷ ನಿಮ್ಮ ಮಾತು ನಾವು ಕೇಳಿದ್ದೇವೆ, ಈಗ ನಮ್ಮ ಮಾತನ್ನು ನೀವು ಕೇಳಿ ಎಂದು ಪಕ್ಷದ ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದ್ದರಿಂದ ಮತ್ತೆ ಸ್ಪರ್ಧಿಸಿದೆ.</p>.<p><strong>* ಸಚಿವರಾಗಲು ನಿಮಗೂ ಅವಕಾಶ ಇತ್ತಲ್ಲವೇ?</strong></p>.<p>ನಾನು ವಿಧಾನ ಪರಿಷತ್ತಿಗೆ ಆಯ್ಕೆ ಆಗಲು ಶ್ರಮಿಸಿದ ಶಾಸಕರಿಗೇ ಸ್ಪರ್ಧೆ ಒಡ್ಡುವುದು ಸರಿ ಅಲ್ಲ ಎಂಬುದು ನನ್ನ ಭಾವನೆ. ಹಾಗಾಗಿ ಸಚಿವ ಸ್ಥಾನ ಕೇಳಲಿಲ್ಲ.</p>.<p><strong>*ಪರಿಷತ್ತಿನ ಕಲಾಪಗಳಲ್ಲಿ ನಿಯಮ ಮೀರಿ ಚರ್ಚೆ ಸಾಗುವುದು ವಾಡಿಕೆ ಆಗಿಬಿಟ್ಟಿದೆ. ಇದನ್ನು ಹೇಗೆ ಸರಿದಾರಿಗೆ ತರುತ್ತೀರಿ?</strong></p>.<p>ಅನೇಕ ಬಾರಿ ನನಗೂ ಅನ್ನಿಸಿದೆ, ಇದು ಸರಿ ಅಲ್ಲ ಎಂದು. ನಿಯಮಾವಳಿಗಳ ಪ್ರಕಾರ ಕಲಾಪ ನಡೆಸುವ ಆಶಯ ನನ್ನದು. ಅಷ್ಟು ಮಾಡಿದರೆಶಿಸ್ತು ತಾನಾಗೇ ಬರುತ್ತದೆ. ಕಲಾಪಗಳಲ್ಲಿ ಬದಲಾವಣೆಗಳನ್ನು ಮಾಡುವುದಿಲ್ಲ, ಇದು ಹಿಂದಿನ ರೀತಿಯೇ ನಡೆದುಕೊಂಡು ಹೋಗಲಿದೆ.</p>.<p><strong>* ಕೆಲವು ಸದಸ್ಯರು ಕಲಾಪಗಳಿಗೆ ಸರಿಯಾಗಿ ಹಾಜರಾಗುವುದಿಲ್ಲ ಎಂಬ ದೂರಿದೆಯಲ್ಲ?</strong></p>.<p>ಜನ ಶಾಸಕರನ್ನು ಆರಿಸಿ ಕಳುಹಿಸುವುದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ. ಹಾಗಾಗಿ ಕಲಾಪಗಳಲ್ಲಿ ಭಾಗವಹಿಸುವುದು ಎಲ್ಲ ಶಾಸಕರ ಜವಾಬ್ದಾರಿ. ಅದನ್ನು ಶಾಸಕರು ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ. ಉದ್ದೇಶಪೂರ್ವಕವಾಗಿ ಯಾರೂ ಸದನಕ್ಕೆಗೈರು ಹಾಜರಾಗುವುದಿಲ್ಲ.</p>.<p><strong>*ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುವ ಬಗ್ಗೆ ನಿಲುವೇನು?</strong></p>.<p>ಬರ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಆದ್ಯತೆ ನೀಡುತ್ತೇನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong>‘ವಿಧಾನ ಪರಿಷತ್ತಿನ ಕಲಾಪಗಳನ್ನು ನಡೆಸುವುದಕ್ಕೆ ಕಾಗದರಹಿತ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅದನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತೇನೆ’</p>.<p>ನೂತನ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಕನಸು ಇದು. ಅಧಿಕಾರ ಸ್ವೀಕರಿಸಿದ ಬಳಿಕ ಬುಧವಾರ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.</p>.<p><strong>*ನೀವು ಸಭಾಪತಿ ಆಗುವ ಬಯಕೆ ಹೊಂದಿದ್ದಿರಾ?</strong></p>.<p>ನಾನು ನಾಲ್ಕು ಬಾರಿ ವಿಧಾನಸಭೆ, ಮೂರು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಇದುವರೆಗೆ ಪಕ್ಷವು ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಈಗ ಜವಾಬ್ದಾರಿ ಕೊಟ್ಟಿದೆ. ಅದನ್ನು ಬಯಸದೇ ಬಂದ ಭಾಗ್ಯ ಎನ್ನಲಾಗದು. ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.</p>.<p><strong>* ರಾಜಕೀಯದಿಂದಲೇ ದೂರವಾಗುವ ಮಾತನಾಡಿದವರು ನೀವು. ಮತ್ತೆ ಈ ಹುದ್ದೆವರೆಗೆ ಹೇಗೆ ಬಂದಿರಿ?</strong></p>.<p>ವಿಧಾನಸಭೆ ಚುನಾವಣೆಯಲ್ಲಿ ಐದನೇ ಬಾರಿ ಸ್ಪರ್ಧಿಸಿದಾಗ ಸೋತೆ. ಆರ್ಥಿಕ ಬಲ ಇಲ್ಲದ ಕಾರಣಕ್ಕೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದೆ. ಪಕ್ಷವು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತು. ಈ ಚುನಾವಣೆ<br />ಗಳಲ್ಲಿ ಎರಡು ಬಾರಿ ಗೆದ್ದ ಬಳಿಕ ಇನ್ನು ಸಾಕೆನಿಸಿತು. ನಾನು ಸ್ಪರ್ಧಿಸದಿರಲು ನಿರ್ಧರಿಸಿದ್ದೆ. 25 ವರ್ಷ ನಿಮ್ಮ ಮಾತು ನಾವು ಕೇಳಿದ್ದೇವೆ, ಈಗ ನಮ್ಮ ಮಾತನ್ನು ನೀವು ಕೇಳಿ ಎಂದು ಪಕ್ಷದ ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದ್ದರಿಂದ ಮತ್ತೆ ಸ್ಪರ್ಧಿಸಿದೆ.</p>.<p><strong>* ಸಚಿವರಾಗಲು ನಿಮಗೂ ಅವಕಾಶ ಇತ್ತಲ್ಲವೇ?</strong></p>.<p>ನಾನು ವಿಧಾನ ಪರಿಷತ್ತಿಗೆ ಆಯ್ಕೆ ಆಗಲು ಶ್ರಮಿಸಿದ ಶಾಸಕರಿಗೇ ಸ್ಪರ್ಧೆ ಒಡ್ಡುವುದು ಸರಿ ಅಲ್ಲ ಎಂಬುದು ನನ್ನ ಭಾವನೆ. ಹಾಗಾಗಿ ಸಚಿವ ಸ್ಥಾನ ಕೇಳಲಿಲ್ಲ.</p>.<p><strong>*ಪರಿಷತ್ತಿನ ಕಲಾಪಗಳಲ್ಲಿ ನಿಯಮ ಮೀರಿ ಚರ್ಚೆ ಸಾಗುವುದು ವಾಡಿಕೆ ಆಗಿಬಿಟ್ಟಿದೆ. ಇದನ್ನು ಹೇಗೆ ಸರಿದಾರಿಗೆ ತರುತ್ತೀರಿ?</strong></p>.<p>ಅನೇಕ ಬಾರಿ ನನಗೂ ಅನ್ನಿಸಿದೆ, ಇದು ಸರಿ ಅಲ್ಲ ಎಂದು. ನಿಯಮಾವಳಿಗಳ ಪ್ರಕಾರ ಕಲಾಪ ನಡೆಸುವ ಆಶಯ ನನ್ನದು. ಅಷ್ಟು ಮಾಡಿದರೆಶಿಸ್ತು ತಾನಾಗೇ ಬರುತ್ತದೆ. ಕಲಾಪಗಳಲ್ಲಿ ಬದಲಾವಣೆಗಳನ್ನು ಮಾಡುವುದಿಲ್ಲ, ಇದು ಹಿಂದಿನ ರೀತಿಯೇ ನಡೆದುಕೊಂಡು ಹೋಗಲಿದೆ.</p>.<p><strong>* ಕೆಲವು ಸದಸ್ಯರು ಕಲಾಪಗಳಿಗೆ ಸರಿಯಾಗಿ ಹಾಜರಾಗುವುದಿಲ್ಲ ಎಂಬ ದೂರಿದೆಯಲ್ಲ?</strong></p>.<p>ಜನ ಶಾಸಕರನ್ನು ಆರಿಸಿ ಕಳುಹಿಸುವುದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ. ಹಾಗಾಗಿ ಕಲಾಪಗಳಲ್ಲಿ ಭಾಗವಹಿಸುವುದು ಎಲ್ಲ ಶಾಸಕರ ಜವಾಬ್ದಾರಿ. ಅದನ್ನು ಶಾಸಕರು ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ. ಉದ್ದೇಶಪೂರ್ವಕವಾಗಿ ಯಾರೂ ಸದನಕ್ಕೆಗೈರು ಹಾಜರಾಗುವುದಿಲ್ಲ.</p>.<p><strong>*ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುವ ಬಗ್ಗೆ ನಿಲುವೇನು?</strong></p>.<p>ಬರ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಆದ್ಯತೆ ನೀಡುತ್ತೇನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>