ಬೆಂಗಳೂರು: ರಾಜ್ಯದಲ್ಲಿ ಬರಗಾಲ ಮರೆಯಾಗುವ ಎಲ್ಲ ಸೂಚನೆಗಳು ಕಂಡು ಬರುತ್ತಿವೆ. ಜೂನ್ 10ರ ಬಳಿಕ ಮುಂಗಾರು ಪ್ರವೇಶಿಸಲಿದ್ದು, ಉತ್ತಮ ಮಳೆಯಾಗುವ ಮುನ್ಸೂಚನೆಯೂ ಹವಾಮಾನ ಇಲಾಖೆಯಿಂದ ಬಂದಿದೆ. ಇದಕ್ಕೆ ಮುಖ್ಯ ಕಾರಣ ‘ಎಲ್ ನಿನೋ’ ವಾತಾವರಣ ಮುಗಿದು, ‘ಲಾ ನಿನಾ’ ಕಾಲಿಡುವುದಕ್ಕೆ ಪೂರಕವಾಗಿ ಪೆಸಿಫಿಕ್ ಸಾಗರದ ಮೇಲೆ ‘ತಟಸ್ಥ’ (ನ್ಯೂಟ್ರಲ್) ವಾತಾವರಣ ಸೃಷ್ಟಿಯಾಗಿದೆ.