ಅಯೋಧ್ಯೆಯ ರಾಮ ಮಂದಿರದ ಮಾದರಿಯನ್ನೇ ಹೋಲುವ ಈ ಕೇಕ್ ಕಲಾಕೃತಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೇಕ್ ಪ್ರತಿಕೃತಿ ತಯಾರಕ ದಾವಣಗೆರೆ ತಾಲ್ಲೂಕಿನ ಹೊಸೂರು ಗ್ರಾಮದ ಯುವಕ ಮಹಾಂತೇಶ್ ಟಿ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಕಳೆದ 15 ವರ್ಷಗಳಿಂದ ವಿವಿಧ ಬಗೆಯ ಕೇಕ್ ತಯಾರಿಸುತ್ತೇನೆ. 20 ಕೆ.ಜಿ ಸಕ್ಕರೆ ಬಳಸಲಾಗಿದೆ. ₹40 ಸಾವಿರ ಖರ್ಚು ಮಾಡಿದ್ದು, ಸತತವಾಗಿ 5 ದಿನಗಳ ಕಾಲ ತಯಾರಿಸಲಾಗಿದೆ ಎಂದರು.